Sunday, June 29, 2025
spot_imgspot_img
spot_imgspot_img

ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನು ಅರೆಸ್ಟ್​ ಮಾಡುವ ವೇಳೆ ಸೈನೈಡ್ ಸೇವಿಸಿ ಸಾವು!

- Advertisement -
- Advertisement -

ಬೆಂಗಳೂರು: ಪೊಲೀಸರು ಆರೋಪಿಯನ್ನು ಅರೆಸ್ಟ್​ ಮಾಡಲು ಬಂದಾಗ ಸೈನೈಡ್​​ ಸೇವಿಸಿ ಮೃತಪಟ್ಟ ಘಟನೆ ನಗರದ ಹೊಸಕೋಟೆಯಲ್ಲಿ ನಡೆದಿದೆ.

ಮೃತ ಆರೋಪಿಯನ್ನು ಆಂಧ್ರಪ್ರದೇಶ ಕೊತ್ತಕೊಟಾ ಮೂಲದ ಸಿ. ಶಂಕರ್(42) ಎನ್ನಲಾಗಿದೆ.

ಜುಲೈ 6ರ ಸಂಜೆ ವೇಳೆಗೆ ಭಟ್ಟರಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನ ಸಮೀಪ ರತ್ನಮ್ಮ ಎಂಬಾಕೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಗಳು 55 ಗ್ರಾಂ ಸರ ಕಸಿದು ಪರಾರಿ ಆಗಿದ್ದರು. ಈ ಕುರಿತು ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶಂಕರ್​, ಚಂದ್ರಶೇಖರ್​ ಎನ್ನುವವನ ಜೊತೆ ಸೇರಿ ಸರಗಳ್ಳತನ ಮಾಡುತ್ತಿದ್ದನು. ಸರಗಳ್ಳರ ಬಗ್ಗೆ ಖಚಿತ ಮಾಹಿತಿ ಪಡೆದ ಕೆ.ಆರ್​ ಪುರ ಪೊಲೀಸರು ಆರೋಪಿಗಳ ಬೆನ್ನತ್ತಿದ್ದರು.

ಹೊಸಕೋಟೆ ಬಳಿಯ ಪಿಲ್ಲಗುಂಪಾದ ದೇವಾಲಯಕ್ಕೆ ಆರೋಪಿಗಳು ಕಳ್ಳತನಕ್ಕೂ ಮೊದಲು ಬಂದಿದ್ದರು. ಈ ವೇಳೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋದಾಗ ಆರೋಪಿ ಶಂಕರ್ ಜೇಬಿನಲ್ಲಿದ್ದ ಸೈನೈಡ್ ತಿಂದು ರಕ್ತಕಾರಿ ಸಾವನ್ನಪ್ಪಿದ್ದಾನೆ. ಮತ್ತೋರ್ವ ಆರೋಪಿ ಚಂದ್ರಶೇಖರ್​​ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!