Friday, May 3, 2024
spot_imgspot_img
spot_imgspot_img

ಬೆಂಗಳೂರು ಕಂಬಳ : ಸಿ.ಎಂ ಸಿದ್ದರಾಮಯ್ಯರನ್ನು ಭೇಟಿಯಾದ ಶಾಸಕ ಅಶೋಕ್ ರೈ

- Advertisement -G L Acharya panikkar
- Advertisement -

ಬೆಂಗಳೂರು: ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕುರಿತು ಚರ್ಚಿಸಲು ಅ.12ರಂದು ಕಂಬಳ ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದ ಕಂಬಳ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಯಾಗಿ ಚರ್ಚೆ ನಡೆಸಿದರು.

ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಮುಖ್ಯಮಂತ್ರಿ ಯವರಿಗೆ ಆಹ್ವಾನವನ್ನು ನೀಡಿದರು.
ಮುಖ್ಯಮಂತ್ರಿನ್ನು ಭೇಟಿಯಾಗಿ ಮಾತುಕತೆ ನಡೆಸಿದ ಕಂಬಳ ಸಮಿತಿಯ ಅಧ್ಯಕ್ಷರಾದ ಶಾಸಕರಾದ ಅಶೋಕ್ ರೈಯವರು ಕಂಬಳಕ್ಕೆ ಬರುವಂತೆ ಮೊದಲ ಆಹ್ವಾನ ನೀಡಿದರು. ಬಳಿಕ ಅವರೊಂದಿಗೆ ಚರ್ಚೆ ನಡೆಸಿದ ಶಾಸಕರು ಕಂಬಳಕ್ಕೆ ವಿವಿಧ ಇಲಾಖೆಯಿಂದ ಸಹಕಾರ ಬೇಕಾಗಿದ್ದು ಸಹಕಾರ ನೀಡುವಂತೆ ಇಲಾಖೆಗೆ ಸೂಚನೆಯನ್ನು ನೀಡುವಂತೆ ಕೇಳಿಕೊಂಡರು.ಕಂಬಳ ನಡೆಯುವ ಬಗ್ಗೆ ಮತ್ತು ಕಂಬಳದ ಬಗ್ಗೆ ಸಿ.ಎಂ.ಅವರಲ್ಲಿ ಶಾಸಕರು ವಿವರಿಸಿದರು.ಕಂಬಳಕ್ಕೆ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ದೇಶ, ವಿದೇಶಗಳ ಸೆಲೆಬ್ರಿಟಿಗಳು ಭಾಗವಹಿಸುವ ಕಾರಣ ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬಗ್ಗೆ ಸಿ.ಎಂ. ಅವರಲ್ಲಿ ವಿವರಣೆಯನ್ನು ನೀಡಲಾಯಿತು.

೨ಕೋಟಿ ಅನುದಾನಕ್ಕೆಮನವಿ

ಮೊಟ್ಟಮೊದಲ ಬಾರಿಗೆ ರಾಜ್ಯ ದ ರಾಜಧಾನಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು ೨ಕೋಟಿಗೂ ಮಿಕ್ಕಿ ಖರ್ಚು ತಗಲಲಿದ್ದು ಸರಕಾರ ಕಂಬಳಕ್ಕೆ ೨ ಕೋಟಿ ಅನುದಾನವನ್ನು ನೀಡುವಂತೆ ಸಿ.ಎಂ.ಅವರಿಗೆ ಮನವಿ ಸಲ್ಲಿಸಿದರು. ದ.ಕ ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು 125 ಮಿಕ್ಕಿ ಜೋಡಿ ಕೋಣಗಳು ಭಾಗವಹಿಸಲಿದ್ದು ಕೋಣಗಳಿಗೆ ನೀರಿನಿಂದ ಹಿಡಿದು ಆಹಾರದ ತನಕ ಎಲ್ಲವನ್ನೂ ಕರಾವಳಿ ಜಿಲ್ಲೆಯಿಂದ ಪೂರೈಕೆ ಮಾಡಬೇಕಾಗಿದೆ. ಹೊಸ ಕರೆ ನಿರ್ಮಾಣ ಸೇರಿದಂತೆ ಎಲ್ಲಾ ಖರ್ಚುಗಳು ದುಬಾರಿಯಾಗಲಿರುವ ಕಾರಣ ಸರಕಾರದಿಂದ ಅನುದಾನವನ್ನು ನೀಡುವಂತೆ ಮನವಿ ಮಾಡಿದರು.ಶಾಸಕರ ಮನವಿಗೆ ಮುಖ್ಯಮಂತ್ತಿಗಳು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಅಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷರಾದ ಸಂಗೀತ ನಿರ್ದೇಶಕ ಗುರು ಕಿರಣ್, ಉಪಾಧ್ಯಕ್ಷ ರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಉದಯ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!