Friday, June 27, 2025
spot_imgspot_img
spot_imgspot_img

ಬಂಟ್ವಾಳ: ನವೀನ್ ಗೌಡ ಫೇಸ್‌ಬುಕ್‌ ಖಾತೆಯಲ್ಲಿ ವಕೀಲ ಸಮುದಾಯದ ಬಗ್ಗೆ ಕೀಳು ಮಟ್ಟದ ಪದ ಬಳಕೆ

- Advertisement -
- Advertisement -

ಈ ಬಗ್ಗೆ ಸೂಕ್ತ ತನಿಖೆ, ಕಾನೂನು ಕ್ರಮ ಕೈಗೊಳ್ಳವಂತೆ ಮನವಿ

ಬಂಟ್ವಾಳ: ವ್ಯಕ್ತಿ ಯೋರ್ವ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ವ್ಯಕ್ತಿಯೋರ್ವ ವಕೀಲ ಸಮುದಾಯದ ಬಗ್ಗೆ ಕೀಳು ಮಟ್ಟದ ಪದಗಳನ್ನು ಬಳಸಿ ಲಾಯರ್ ಎಂಬ ಪದಕ್ಕೆ ಅವಮಾನ ಮಾಡಿರುವ ಬಗ್ಗೆ ವರದಿಯಾಗಿದೆ.

ಶಿವಾನಂದ ಎಮ್‌ ವಿ ವಕೀಲರು ಮಂಗಳೂರು ಎಂಬವರ ದೂರಿನಂತೆ ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್‌ಬುಕ್‌ನಲ್ಲಿ ನನ್ನ ಖಾತೆಯ ಫ್ರೆಂಡ್ ಲಿಸ್ಟ್‌ನಲ್ಲಿ ಇರುವ ನವೀನ್ ಗೌಡ ಎಂಬಾತನು 24/6/2025 ರಂದು ವಕೀಲ ಸಮುದಾಯದ ಬಗ್ಗೆ ಬೇವರ್ಸಿ ಲಾಯರ್‌ಗಳು ಎಂದು ಕೆಳಮಟ್ಟದ ಕೀಳು ಪದಗಳನ್ನು ಬಳಸಿ ತನ್ನ ಖಾತೆಯ ಮೂಲಕ ಫೇಸ್‌ಬುಕ್‌ನಲ್ಲಿ ಬಿತ್ತರಿಸಿ ಲಾಯರ್ ಎಂಬ ಪದಕ್ಕೆ ಅವಮಾನ ಮಾಡಿರುತ್ತಾರೆ.

ಶಿವಾನಂದರವರು ಸುಮಾರು 12 ವರ್ಷಗಳಿಂದ ಮಂಗಳೂರು, ಬಿ.ಸಿ ರೋಡ್,ಬೆಳ್ತಂಗಡಿ ಮತ್ತು ಪುತ್ತೂರು ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದು ಭಾರತದ ಕಾನೂನಿನ ನೆಲದ ಹಾಗೂ ಈ ನೆಲದಲ್ಲಿ ಇರುವಂತಹ ಪ್ರತಿಯೊಂದು ವೃತ್ತಿಯ ಮೇಲೆ ಅಪಾರವಾಗಿ ಗೌರವವನ್ನು ಇಟ್ಟುಕೊಂಡಿರುವ ವ್ಯಕ್ತಿಯಾಗಿರುತ್ತಾರೆ.

ತನ್ನ ಫೇಸ್ಬುಕ್ ಖಾತೆಯ ಫ್ರೆಂಡ್ ಲಿಸ್ಟ್ ನಲ್ಲಿರುವ -Naveen Gowda, Lives in Delhi, From Dharmasthala, Karnataka, India ಎಂದು ನಮೂದಿಸಿರುವ ಖಾತೆಯಲ್ಲಿ *ಬೆಂಗಳೂರಿನ ಎರಡು ಬೇವರ್ಸಿ ಲಾಯರ್‌ಗಳು ದಕ್ಷಿಣ ಕನ್ನಡದವರನ್ನು ಮಂಗ ಮಾಡಿ ಸ್ವಲ್ಪ ಹಣ ಮಾಡಬಹುದಾ ಅಂತ ಅನ್ನಿಸುತ್ತದೆ!! ಎಂದು ನ್ಯಾಯಾಲಯದ ಅಧಿಕಾರಿಗಳಾಗಿರುವ ವಕೀಲರನ್ನು * ಬೇವರ್ಸಿ ಲಾಯರ್‌ಗಳು ಎಂಬುದಾಗಿ ವಕೀಲ ಸಮುದಾಯದ ಬಗ್ಗೆ ಕೀಳು ಪದಗಳನ್ನು ಬಳಸಿ ಲಾಯರ್ ಹುದ್ದೆಗೆ ಅವಮಾನ ಮಾಡಿರುತ್ತಾರೆ.

ಇದರಿಂದ ಕಾನೂನಿನ ಮೇಲೆ ಅಪಾರವಾದ ಗೌರವವಿರುವ ಹಾಗೂ ನ್ಯಾಯಾಲಯದ ಅಧಿಕಾರಿಗಳೆಂದು ಉಲ್ಲೇಖವಿರುವ ಇಡೀ ವಕೀಲ ಸಮುದಾಯಕ್ಕೆ, ಆ ವ್ಯಕ್ತಿಯು ಬಳಸಿದ ಕೀಳು ಮಟ್ಟದ ಪದದಿಂದ ನನಗೆ ಮತ್ತು ನನ್ನಂತಹ ಇತರ ವಕೀಲರಿಗೆ ಮತ್ತು ಅವರ ವೃತ್ತಿ-ಘನತೆಗೆ ಮಾಡಿದಂತಹ ಅವಮಾನವಾಗಿರುತ್ತದೆ.

ಆದರಿಂದ ಆ ನವೀನ್ ಗೌಡ ಹೆಸರಿನಿಂದ ಫೇಸ್‌ಬುಕ್‌ನಲ್ಲಿ ಗುರುತಿಸಲ್ಪಟ್ಟ ವ್ಯಕ್ತಿಯನ್ನು ಕಂಡು ಹಿಡಿದು ವಿಚಾರಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿ ಶಿವಾನಂದರವರು ಈ ಮೂಲಕ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!