Thursday, March 28, 2024
spot_imgspot_img
spot_imgspot_img

ಬಂಟ್ವಾಳ: ಟ್ಯಾಂಕರ್ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿ; ಆರೋಪಿಯ ವಿರುದ್ಧ ದೂರು ದಾಖಲು

- Advertisement -G L Acharya panikkar
- Advertisement -

ಬಂಟ್ವಾಳ: ಟ್ಯಾಂಕರ್ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿ ಆರೋಪಿ ಪರಾರಿಯಾದ ಘಟನೆ ಬ್ರಹ್ಮರಕೋಟ್ಲು ಟೋಲ್ ಗೇಟ್ ಸಮೀಪ ಶುಕ್ರವಾರ ಸಂಜೆ ನಡೆದಿದೆ.

ಬಿಕರ್ನ್ ಕಟ್ಟೆ ಸಮೀಪದ ಮರೋಳಿ ಗ್ರಾಮದ ಕುಲಶೇಖರ ಬಿಜ್ಜೂಡಿ ನಿವಾಸಿ ಜಾರ್ಜ್ ರೋಡ್ರಿಗಸ್ ಎಂಬವರ ಮೇಲೆ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿ ಅವ್ಯಾಚ್ಚ ಶಬ್ದಗಳಿಂದ ಬೈದು ಪರಾರಿಯಾಗಿದ್ದಾನೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರಿನಲ್ಲಿರುವ ಇನಿತ್ ಕುಮಾರ ಜಲನ್ ರವರ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ರೋಡ್ರಿಗಸ್ ಅವರು ಜೂನ್ 10 ರಂಧು ಕೊಯಮುತ್ತೂರಿನಿಂದ ಹೊರಟು ದಿನ ಜೂನ್ 11 ರಂದು ಸಂಜೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರ ಕೋಟ್ಲು ಟೋಲ್ ಗೇಟ್ ಬಳಿ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾರಿಯ ಹಿಂದಿನಿಂದ ಬಂದ ಒಬ್ಬ ಯುವಕ ಲಾರಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಚಾಲಕ ಶೀಟಿನಲ್ಲಿದ್ದ ರೋಡ್ರಿಗಸ್ ರವರ ಶರ್ಟಿನ್ ಕಾಲರ್ ಹಿಡಿದು ಕೆಳಗೆ ಎಳೆದು ದೂಡಿ ಹಾಕಿದ್ದಾನೆ.

ದೂಡಿ ಹಾಕಿದ್ದ ಪರಿಣಾಮ ರೋಡ್ರಿಗಸ್ ಅವರ ಕೊರಳಿನಲ್ಲಿನ ಜಪ ಮಾಲೆ ಹಾಗೂ ಕೀಸೆಯಲ್ಲಿನ ಡಿ ಎಲ್, 2 ಸಾವಿರ ರೂ ಕೆಳಗೆ ಬಿದ್ದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಾಗೂ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್, ಅಪರಾಧ ವಿಭಾಗದ ಎಸ್‌ಐ.ಕಲೈಮಾರ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!