- Advertisement -
- Advertisement -
ವಿಟ್ಲದ ಪರಿಸರದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರೇರಣೆಯ ಬೆಳಕಾಗಿ ಸಹಸ್ರಾರು ಮಂದಿಗೆ ಜ್ಞಾನದ ದೀವಿಗೆಯಾಗಿದ್ದ ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಬಟ್ಟು ಸ್ವಾಮಿ (ನಾರಾಯಣ) ಇಂದು ನಿಧನರಾಗಿದ್ದಾರೆ. ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಟ್ಟು ಸ್ವಾಮಿ ಅವರು ಇಂದು ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.
ಸಹಸ್ರಾರು ಮಂದಿಗೆ ಗುರು ಸ್ವಾಮಿ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡಿರುತ್ತಾರೆ. ಇಂದು ಸ್ವಗೃಹದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಪುತ್ರರಾದ ಪ್ರವೀಣ್, ಅರುಣ್ ವಿಟ್ಲ, ರವಿಶಂಕರ್ ಹಾಗೂ ಅಪಾರ ಭಕ್ತವರ್ಗವನ್ನು ಅಗಲಿದ್ದಾರೆ.
- Advertisement -