Monday, June 30, 2025
spot_imgspot_img
spot_imgspot_img

ಕಟೀಲು ದೇವಳದಲ್ಲಿ ನೀರ್ಕಜೆ ‘ನಾಟ್ಯನಿನಾದ ಕಲಾ ಶಾಲೆ’ಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ

- Advertisement -
- Advertisement -

ಮಂಗಳೂರು: ನವರಾತ್ರಿಯ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯನಿನಾದ ಕಲಾ ಶಾಲೆ, ನೀರ್ಕಜೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ನಾಟ್ಯನಿನಾದ ಕಲಾ ಶಾಲೆ, ನೀರ್ಕಜೆ ಇದರ ನೃತ್ಯ ನಿರ್ದೇಶಕಿ ಶ್ರೀಮತಿ ರಮ್ಯ ಪುನೀತ್ ಇವರ ಶಿಷ್ಯ ವೃಂದದವರಿಂದ ನಡೆದ ಭರತ ನಾಟ್ಯ ಕಾರ್ಯಕ್ರಮದಲ್ಲಿ ಹಿಮ್ಮೇಳದ ಹಾಡುಗಾರಿಕೆಯಲ್ಲಿ ವಸಂತಕುಮಾರ್ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ,ಕೊಳಲಿನಲ್ಲಿ ವಿದ್ವಾನ್ ಕೃಷ್ಣ ಗೋಪಾಲ್ ಪುಂಜಾಲಕಟ್ಟೆ ,ನಟ್ವಾಂಗದಲ್ಲಿ ಶ್ರೀಮತಿ ರಮ್ಯ ಪುನೀತ್ ಸಹಕರಿಸಿದರು. ಕಲಾ ಶಾಲೆಯ ಸುಮಾರು ಹನ್ನೊಂದು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -

Related news

error: Content is protected !!