Friday, April 26, 2024
spot_imgspot_img
spot_imgspot_img

ಭೀಮಾತೀರದ ಹಂತಕನಿಂದ ಶತ್ರು ಸಂಹಾರ ಪೂಜೆ

- Advertisement -G L Acharya panikkar
- Advertisement -

ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಶತ್ರುಸಂಹಾರ ಪೂಜೆ ನೆರವೇರಿಸಿದ್ದಾನೆ.
ಈ ವೇಳೆ ಕೈಯಲ್ಲಿ ತಲವಾರ್ ಹಿಡಿದು ಆರ್ಭಟ ನಡೆಸಿರುವ ಆರೋಪ ಕೇಳಿಬಂದಿದೆ.

ಗುಂಡಿನ ದಾಳಿಗೆ ಒಳಗಾಗಿ ಬದುಕಿ ಬಂದಿದ್ದ ಡೆಡ್ಲಿ ಹಂತಕ ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಬಬಲಾದ ಗ್ರಾಮದೇವಿ ದೇಗುಲದಲ್ಲಿ ಶತ್ರುಸಂಹಾರ ಪೂಜೆ ನೆರವೇರಿಸಿದ್ದಾನೆ. ಈ ವೇಳೆ ತಲವಾರ್ ಬೀಸಿ ಬಾಳೆ ದಿಂಡು, ಕುಂಬಳಕಾಯಿಯನ್ನು ಕತ್ತರಿಸಿದ್ದಾನೆ. ಬಾಗಪ್ಪ ಹರಿಜನ್ ಪೂಜೆ ವೇಳೆಯ ವೇಷಭೂಷಣ ಕಂಡು ಭೀಮಾತೀರದ ಮಂದಿ ಬೆಚ್ಚಿಬಿದ್ದಿದ್ದಾರೆ. ಪೂಜೆ ವೇಳೆ ಬಾಗಪ್ಪ ಹರಿಜನ್​ಗೆ ಆತನ ಬೆಂಬಲಿಗರು ಸಾಥ್ ನೀಡಿದ್ದಾರೆ.

ಇಂಡಿ ಚಿನ್ನದ ವ್ಯಾಪಾರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿದ್ದ ಬಾಗಪ್ಪ ಹರಿಜನ್ ಬಳಿಕ ಜೈಲಿನಿಂದ ಮರಳಿದ್ದ. ಬಳಿಕ ಪ್ರಕರಣವೊಂದರ ಹಿನ್ನೆಲೆಯಲ್ಲಿ ಕೋರ್ಟ್​​​ಗೆ ಹಾಜರಾಗಿದ್ದ ಬಾಗಪ್ಪ ಹರಿಜನ್​​, ನನ್ನ ಸುದ್ದಿಗೆ ಬಂದರೆ 24 ಗಂಟೆಯಲ್ಲಿ ಬಂದೂಕು ಹಿಡಿದು ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

- Advertisement -

Related news

error: Content is protected !!