- Advertisement -
- Advertisement -
ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಶತ್ರುಸಂಹಾರ ಪೂಜೆ ನೆರವೇರಿಸಿದ್ದಾನೆ.
ಈ ವೇಳೆ ಕೈಯಲ್ಲಿ ತಲವಾರ್ ಹಿಡಿದು ಆರ್ಭಟ ನಡೆಸಿರುವ ಆರೋಪ ಕೇಳಿಬಂದಿದೆ.
ಗುಂಡಿನ ದಾಳಿಗೆ ಒಳಗಾಗಿ ಬದುಕಿ ಬಂದಿದ್ದ ಡೆಡ್ಲಿ ಹಂತಕ ಕಲಬುರಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಬಬಲಾದ ಗ್ರಾಮದೇವಿ ದೇಗುಲದಲ್ಲಿ ಶತ್ರುಸಂಹಾರ ಪೂಜೆ ನೆರವೇರಿಸಿದ್ದಾನೆ. ಈ ವೇಳೆ ತಲವಾರ್ ಬೀಸಿ ಬಾಳೆ ದಿಂಡು, ಕುಂಬಳಕಾಯಿಯನ್ನು ಕತ್ತರಿಸಿದ್ದಾನೆ. ಬಾಗಪ್ಪ ಹರಿಜನ್ ಪೂಜೆ ವೇಳೆಯ ವೇಷಭೂಷಣ ಕಂಡು ಭೀಮಾತೀರದ ಮಂದಿ ಬೆಚ್ಚಿಬಿದ್ದಿದ್ದಾರೆ. ಪೂಜೆ ವೇಳೆ ಬಾಗಪ್ಪ ಹರಿಜನ್ಗೆ ಆತನ ಬೆಂಬಲಿಗರು ಸಾಥ್ ನೀಡಿದ್ದಾರೆ.
ಇಂಡಿ ಚಿನ್ನದ ವ್ಯಾಪಾರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇತ್ತೀಚೆಗೆ ಜೈಲು ಸೇರಿದ್ದ ಬಾಗಪ್ಪ ಹರಿಜನ್ ಬಳಿಕ ಜೈಲಿನಿಂದ ಮರಳಿದ್ದ. ಬಳಿಕ ಪ್ರಕರಣವೊಂದರ ಹಿನ್ನೆಲೆಯಲ್ಲಿ ಕೋರ್ಟ್ಗೆ ಹಾಜರಾಗಿದ್ದ ಬಾಗಪ್ಪ ಹರಿಜನ್, ನನ್ನ ಸುದ್ದಿಗೆ ಬಂದರೆ 24 ಗಂಟೆಯಲ್ಲಿ ಬಂದೂಕು ಹಿಡಿದು ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
- Advertisement -