






ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಜಿಲ್ಲಾ ಅಧ್ಯಕ್ಷರನ್ನು ರಾಜ್ಯ ಬಿಜೆಪಿ ನೇಮಕ ಮಾಡಿದೆ.
ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ 10 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ. ಈ ಕೆಳಕಂಡ 10 ಮಂದಿ ನೂತನ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದಾರೆ.
ಇದರಲ್ಲಿ ಭಾರತೀಯ ಜನತಾ ಪಾರ್ಟಿಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಶ್ರೀ ಕುತ್ಯಾರು ನವೀನ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಮೈಸೂರು ಗ್ರಾಮಾಂತರದಿಂದ ಕೆ.ಎನ್.ಸುಬ್ಬಣ್ಣ, ಹಾಸನ ಜಿಲ್ಲೆಯಿಂದ ಸಿದ್ದೇಶ್ ನಾಗೇಂದ್ರ, ಕೊಡಗು ಜಿಲ್ಲೆಯಿಂದ ರವಿ ಕಾಳಪ್ಪ,ಹಾವೇರಿ ಜಿಲ್ಲೆಯಿಂದ ವಿರೂಪಾಕ್ಷಪ್ಪ ಬಳ್ಳಾರಿ, ದಾವಣಗೆರೆ ಜಿಲ್ಲೆಯಿಂದ ಎನ್.ರಾಜಶೇಖರ, ಚಿತ್ರದುರ್ಗ ಜಿಲ್ಲೆಯಿಂದ ಕೆ.ಟಿ. ಕುಮಾರಸ್ವಾಮಿ, ತುಮಕೂರು ಜಿಲ್ಲೆಯಿಂದ ಹೆಚ್.ಎಸ್.ರವಿಶಂಕರ್ (ಹೆಬ್ಬಾಕ), ಮಧುಗಿರಿ ಜಿಲ್ಲೆಯಿಂದ ಚಿದಾನಂದ ಗೌಡ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಎಸ್.ವಿ.ರಾಮಚಂದ್ರ ಗೌಡ (ಸೀಕಲ್) ಆಯ್ಕೆಯಾಗಿದ್ದಾರೆ.