Tuesday, April 30, 2024
spot_imgspot_img
spot_imgspot_img

ಭಾರತೀಯ ಜನತಾ ಪಾರ್ಟಿ, ರೈತಮೋರ್ಚಾ ಬಂಟ್ವಾಳ ಕ್ಷೇತ್ರ, ಕೊಳ್ನಾಡು ಬಿ.ಜೆ.ಪಿ ಇದರ ನೇತ್ರತ್ವದಲ್ಲಿ ಆಯುಷ್ಮಾನ್ ಕಾರ್ಡ್‌ ನೋಂದಾವಣೆ

- Advertisement -G L Acharya panikkar
- Advertisement -

ಭಾರತೀಯ ಜನತಾ ಪಾರ್ಟಿ, ರೈತಮೋರ್ಚಾ ಬಂಟ್ವಾಳ ಕ್ಷೇತ್ರ, ಕೊಳ್ನಾಡು ಬಿ.ಜೆ.ಪಿ ಇದರ ನೇತ್ರತ್ವದಲ್ಲಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಕಾರ್ಡ್‌ ನೋಂದಾವಣೆಯು ಕೊಳ್ನಾಡು ಗ್ರಾಮದ ಸಾಲೆತ್ತೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ತಾಲೂಕು ಪಂಚಾಯತ್ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಪೂಜಾರಿಯವರು ಸ್ವಾಗತಿಸಿದರು. ಕ್ಷೇತ್ರ ಬಿಜೆಪಿ ಸದಸ್ಯ ಬಾಲಕೃಷ್ಣ ಸೆರ್ಕಳ ಅಯುಷ್ಮಾನ್ ಕಾರ್ಡಿನ ಮಹತ್ವದ ಬಗ್ಗೆ ಜನರಿಗೆ ತಿಳಿಸಿದರು. ಕಾರ್ಯಕ್ರಮದ ಸಂಯೋಜಕರಾದ ಕ್ಷೇತ್ರ ರೈತ ಮೋರ್ಚಾ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಅಗರಿ, ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ಜಯರಾಮ್ ನಾಯ್ಕ್ ಕುಂಟ್ರಕಲ, ಕೊಳ್ನಾಡು ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಹಿತ್,ಶಕ್ತಿಕೇಂದ್ರ ಪ್ರಮುಖ್ ವೇಣುಗೋಪಾಲ್ ಮಂಕುಡೆ, ಪಕ್ಷದ ಕಾರ್ಯಕರ್ತರಾದ ಗಂಗಾಧರ್ ಆಚಾರ್ಯ, ಸದಾನಂದ ಶೆಟ್ಟಿ ಅಗರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಮೆಚ್ಚುಗೆ ಸೂಚಿಸಿದರು.

- Advertisement -

Related news

error: Content is protected !!