Tuesday, July 1, 2025
spot_imgspot_img
spot_imgspot_img

ವಿಖಾಯ ರಕ್ತದಾನಿ ಬಳಗ ಪುತ್ತೂರು, ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕಬಕ ಕ್ಲಸ್ಟರ್ ಹಾಗು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ

- Advertisement -
- Advertisement -

ಪುತ್ತೂರು: ವಿಖಾಯ ರಕ್ತದಾನಿ ಬಳಗ ಪುತ್ತೂರು, ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕಬಕ ಕ್ಲಸ್ಟರ್ ಹಾಗು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಯೋಗದೊಂದಿಗೆ ಪಾಟ್ರಕೊಡಿಯಲ್ಲಿ ಬೃಹತ್ ರಕ್ತದಾನ ಶಿಬಿರವು ಇಸ್ಮಾಯಿಲ್ ಬೀಟಿಗೆ (ಕಾರ್ಯದರ್ಶಿ ವಿಖಾಯ ಕಬಕ ಕ್ಲಸ್ಟರ್)ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉದ್ಘಾಟನ ಭಾಷಣದಲ್ಲಿ ಮಾತನಾಡುತ್ತಾ ಜನಾಬ್ ಮೂಸಲ್ ಪೈಝಿ ಪಾಟ್ರಕೊಡಿಯವರು ರಕ್ತದಾನ ಅವಶ್ಯಕತೆ ಬಗೆ ಸವಿಸ್ತಾರವಾಗಿ ವಿವರಿಸಿದರು.
ಇಬ್ರಾಹಿಂ ಕಡಬ ಉಸ್ತುವಾರಿ ವಿಖಾಯ ರಕ್ತದಾನರವರು ಮಾತನಾಡುತ್ತಾ ವಿಖಾಯದ ಮೂಲಕ ದ.ಕ. ಜಿಲ್ಲೆಯಲ್ಲಿ 2100 ಯುನಿಟ್ ರಕ್ತವನ್ನು ವಿತರಿಸಲಾಗಿದು. ವಿಖಾಯ ರಕ್ತದ ಅವಶ್ಯಕತೆಯನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಡಾ. ರಾಮಚಂದ್ರ ಭಟ್, ದಾವೂದ್ ಇಸ್ಮಯಿಲ್ ಪೈಝಿ, ರಾಮಚಂದ್ರ ಭಟ್ ಅಧ್ಯಾಪಕರು ಕೆದಿಲ ಹಿರಿಯ ಪ್ರಾಥಮಿಕ ಶಾಲೆ, ಹಮೀದ್ ಹಾಜಿ ಪಾಟ್ರಕೊಡಿ, ಮಹಮ್ಮದ್ ಮಾಸ್ಟರ್ ಪಾಟ್ರಕೊಡಿ,ಅಬ್ದುಲ್ ರಶೀದ್ ಮುಸ್ಲಿಯಾರ್ ಪೊಳ್ಯ ಅಹಮ್ಮದ್ ಹಾಜಿ ಕುಕ್ಕರಬೆಟ್ಟು ರವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಶರೀಪ್ ಕೆ ಎಸ್ ಪಾಟ್ರಕೊಡಿ ಯವರು ಸ್ವಾಗತಿಸಿ ನಿರೂಪಿಸಿದರು.

- Advertisement -

Related news

error: Content is protected !!