- Advertisement -
- Advertisement -




ಇಲ್ಲಿದೆ ಬಜೆಟ್ ಮುಖ್ಯಾಂಶಗಳು
ಕೇಂದ್ರ ಹಣಕಾಸು ಬಜೆಟ್ ಮಂಡನೆ ನಡೆಯುತ್ತಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಆರ್ಥಿಕತೆಯಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲು 2024-25ರ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂಬತ್ತು ಆದ್ಯತೆ ಕ್ಷೇತ್ರಗಳನ್ನು ಘೋಷಿಸಿದ್ದಾರೆ. 9 ಆದ್ಯತೆ ಕ್ಷೇತ್ರಗಳಲ್ಲಿ ಉತ್ಪಾದಕತೆ, ಉದ್ಯೋಗ, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ನಾವೀನ್ಯತೆ ಮತ್ತು ಸುಧಾರಣೆಗಳು ಸೇರಿವೆ. ಪ್ರಧಾನಿ ಮೋದಿ ಸರ್ಕಾರ 3.0 ಅವಧಿಯ ಮೊದಲ ಬಜೆಟ್ ಮಂಡನೆಯಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ಮಂಡನೆಯ ವಿಶೇಷ ಘೋಷಣೆಗಳು:
- ಆಯ್ದ ನಗರಗಳಲ್ಲಿ 100 ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಕ್ರಮ
- ಪಿಎಂ ಸೂರ್ಯ ಘರ್ ಮುಫ್ ಬಿಜಲೀ ಯೋಜನೆಗೆ ಉತ್ತಮ ಸ್ಪಂದನೆ
- ಬಿಹಾರದ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ
- ಗಯಾ, ಬೋನ್ಗಯಾಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿಗೆ ಅನುದಾನ
- ಒಡಿಶಾ ದೇವಾಲಯಗಳ ಅಭಿವೃದ್ಧಿಗೂ ಹಣಕಾಸು ನೆರವು
- ಪ್ರವಾಸಿ ಸ್ಥಳವಾಗಿ ನಳಂದಾ ವಿವಿ ಅಭಿವೃದ್ಧಿಗೆ ಕ್ರಮ,
- ಪ್ರವಾಹ ಪೀಡಿತ ಬಿಹಾರಕ್ಕೆ 11 ಸಾವಿರ ಕೋಟಿ ಅನುದಾನ ಘೋಷಣೆ,
- ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
- ಎನ್ಡಿಎ ಭಾಗವಾಗಿರುವ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ನೆರವು ಘೋಷಣೆ
- ಕೈಗಾರಿಕೆಗಳ ಕಾರ್ಮಿಕರಿಗೆ ಬಾಡಿಗೆ ಮನೆ ಸೌಲಭ್ಯ, ದೇಶದಲ್ಲಿ 12 ಹೊಸ ಇಂಡಸ್ಟ್ರಿಯಲ್ ಪಾರ್ಕ್ಗಳ ಘೋಷಣೆ,
- ಇಂಟರ್ನ್ಶಿಪ್ ಯೋಜನೆಯಡಿ 5000 ರೂಪಾಯಿಗಳ ಇಂಟರ್ನ್ಶಿಪ್ ಭತ್ಯೆ ಮತ್ತು 6,000 ರೂಪಾಯಿಗಳ ಒಂದು ಬಾರಿಯ ಸಹಾಯಧನ
- MSMEs ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ವಿಸ್ತರಣೆ- ನೂರು ಕೋಟಿವರೆಗೆ ಸಾಲಸೌಲಭ್ಯ
- 2.66 ಲಕ್ಷ ಕೋಟಿ ಮೀಸಲು ದೇಶಾದಾದ್ಯಂತ ಗ್ರಾಮೀಣಾಭಿವೃದ್ಧಿಗೆ ಒತ್ತು
- ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ 2.66 ಲಕ್ಷ ಕೋಟಿ ರೂಪಾಯಿ ಮುದ್ರಾ ಲೋನ್ ಮಿತಿ ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಳ
- ಹೈದರಾಬಾದ್ – ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ
- ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ ಘೋಷಣೆ
- ವಿಶಾಖಪಟ್ಟಣಂ – ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ
- 30 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 14 ದೊಡ್ಡ ನಗರಗಳಿಗೆ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆ
- ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಧಾನ ಮಂತ್ರಿ ಜನಜಾತಿಯ ಉನ್ನತ್ ಗ್ರಾಮ ಅಭಿಯಾನ
- ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನೀರು ಪೂರೈಕೆಗೆ ಉತ್ತೇಜನ
- ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 3 ಕೋಟಿ ಹೆಚ್ಚುವರಿ ಮನೆಗಳು
- ಇತರ ಪೋರ್ಟಲ್ಗಳೊಂದಿಗೆ ಇ-ಶ್ರಮ್ ಪೋರ್ಟಲ್ನ ಸಮಗ್ರ ಏಕೀಕರಣ
- ಕ್ಯಾನ್ಸರ್ ಚಿಕಿತ್ಸೆಗಾಗಿ ಇನ್ನೂ ಮೂರು ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧಾರ
- ಮೊಬೈಲ್ ಫೋನ್ ಮೇಲಿನ ಕಸ್ಟಮ್ ಸುಂಕ 15% ಕ್ಕೆ ಇಳಿಕೆ
- ದತ್ತಿ ಸಂಸ್ಥೆಗಳಿಗಿರುವ ಎರಡು ತೆರಿಗೆ ವಿನಾಯಿತಿ ವ್ಯವಸ್ಥೆಗಳನ್ನು ಒಂದಾಗಿ ವಿಲೀನಗೊಳಿಸಲಾಗುವುದು
- Advertisement -