- Advertisement -
- Advertisement -
ಮಡಿಕೇರಿ: ಕುಶಾಲನಗರದ ಆನೆಕಾಡು ಬಳಿ ಸರಣಿ ಅಪಘಾತ ನಡೆದಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ಲುವ ಸಂದರ್ಭ ಹಿಂಬದಿಯಲ್ಲಿದ್ದ ಸ್ವಿಫ್ಟ್ ಕಾರು ನಿಧಾನವಾಗಿ ಚಲಿಸಲು ಆರಂಭಿಸಿದೆ. ಈ ಕಾರಿನ ಹಿಂಬದಿಯಲ್ಲಿದ್ದ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ವಿಫ್ಟ್ ಬಸ್ಸಿಗೆ ಡಿಕ್ಕಿಯಾಗಿದೆ.
ಸೀಟ್ ಬೆಲ್ಟ್ ಹಾಕಿದ್ದರಿಂದ ಮತ್ತು ಏರ್ ಬ್ಯಾಗ್ ತೆರೆದುಕೊಂಡು ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ವಿಫ್ಟ್ ಕಾರು ನಂದಿಮೊಟ್ಟೆ ನಿವಾಸಿ ಮೂಸ ಎಂಬುವವರಿಗೆ ಸೇರಿದ್ದಾಗಿದೆ.
- Advertisement -