Friday, June 27, 2025
spot_imgspot_img
spot_imgspot_img

ಪ್ರಯಾಣಿಕನ ಪ್ಯಾಂಟ್ ಜೇಬಿನಿಂದ ಹಣ ಎಗರಿಸಿ ಪರಾರಿಯಾಗಲು ಯತ್ನ- ಇಬ್ಬರು ಕಳ್ಳರ ಬಂಧನ

- Advertisement -
- Advertisement -

ಉಳ್ಳಾಲ,ಡಿ.19: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಪ್ಯಾಂಟ್ ಜೇಬಿನಿಂದ 50,000 ಸಾವಿರ ರೂ. ಹಣ ಎಗರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಓರ್ವ ಕಾಸರಗೋಡು ಮೂಲದ ಮಸ್ತಾಫ ಎಂದು ತಿಳಿದು ಬಂದಿದ್ದು, ಇನ್ನೋರ್ವ ಆರೋಪಿ ಸರಿಯಾದ ಹೆಸರು ಹೇಳುತ್ತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಕೊಣಾಜೆಯ ವ್ಯಕ್ತಿಯೋರ್ವರು 51 ನಂಬರಿನ ಸಿಟಿ ಬಸ್ಸಿನಲ್ಲಿ ತೊಕ್ಕೊಟ್ಟಿಗೆ ಪ್ರಯಾಣಿಸಿ ಬಂದಿದ್ದರು. ಜೊತೆಯಲ್ಲಿ ಕುಟುಂಬದ ಇಬ್ಬರು ಮಹಿಳೆಯರು, ಒಂದು ಮಗು ಕೂಡ ಇತ್ತು.

ಇದೇ ವೇಳೆ, ದೇರಳಕಟ್ಟೆ ಯೇನೆಪೋಯ ಬಸ್ಸು ತಂಗುದಾಣದಲ್ಲಿ ಕಾಸರಗೋಡು ಮೂಲದ ಇಬ್ಬರು ಬಸ್ಸು ಹತ್ತಿದ್ದರು. ಕೊಣಾಜೆಯ ಕುಟುಂಬದವರು ತೊಕ್ಕೊಟ್ಟಿನಲ್ಲಿ ಬಸ್ಸಿನಿಂದ ಇಳಿಯುವ ವೇಳೆ ಕಳ್ಳರು ಆ ವ್ಯಕ್ತಿಯ ಜೇಬಿನಿಂದ 50,000 ರೂ. ಎಗರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಕುಟುಂಬಸ್ಥರೊಂದಿಗಿದ್ದ ಮಗು ಜಾಣ್ಮೆ ಮೆರೆದು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ನೋಡಿ ಕಿರುಚಿದೆ. ಕೂಡಲೇ ಸ್ಥಳೀಯರು ಓರ್ವ ಕಳ್ಳ ಮುಸ್ತಾಫನನ್ನು ಹಿಡಿದು ಗೂಸಾ ಕೊಟ್ಟು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ತೊಕ್ಕೊಟ್ಟಿನಲ್ಲೇ ಇದ್ದ ಮತ್ತೋರ್ವ ಕಳ್ಳನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!