22ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಗಸ್ಟ್ 22ರಂದು.
ವಿಟ್ಲ:– ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಹಾಗೂ ಕಾರ್ತಿಕ್ ಫ್ರೆಂಡ್ಸ್ ಕ್ಲಬ್,ರಿ, ಚಂದಳಿಕೆ ವಿಟ್ಲ ಇದರ ಆಶ್ರಯ ದಲ್ಲಿ “22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವೂ ” ತಾ22-08-2020 ಶನಿವಾರ ವಿಟ್ಲ ಸಮೀಪದ ಮಂಗಳಾ ಮಂಟಪ ಶ್ರೀ ರಾಮ ನಗರ ಚಂದಳಿಕೆ ಯಲ್ಲಿ ಜರಗಲಿದೆ.
ಶ್ರೀ ಗಣೇಶೋತ್ಸವ ದ ಕಾರ್ಯಕ್ರಮಗಳು:-
ಪೂ, ಗಂಟೆ 7.00ಕ್ಕೆ 12ಕಾಯಿಗಳ ಗಣಪತಿ ಹೋಮ. 8.00ಕ್ಕೆ ಮೂರ್ತಿ ಪ್ರತಿಷ್ಠೆ. ಬೆಳಗಿನ ಪೂಜೆ. 9.00ಕ್ಕೆ ಧ್ವಜಾರೋಹಣ ಹಾಗೂ ದೀಪ ಬೆಳಗಿಸಿ ಉದ್ಘಾಟನೆ. 10.00ಕ್ಕೆ ಭಜನೆ. ಮ,12.00ಕ್ಕೆ ಮಹಾಪೂಜೆ.2.00ಕ್ಕೆ ರಂಗಪೂಜೆ ಮಹಾಪೂಜೆ ಪ್ರಸಾದ ವಿತರಣೆ. ಮತ್ತು
ಸಂಜೆ 4.00ಗಂಟೆಗೆ ವಿಸರ್ಜನಾಪೂಜೆ ಹಾಗೂ ದೇವರ ವಿಸರ್ಜನೆ ನಡಯಲಿರುವುದು.
ಭಕ್ತಾದಿಗಳು ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿಕೊಂಡು ಬಂದು ಶ್ರೀ ದೇವರ ದರ್ಶನ ಪಡೆದು ಕೊಳ್ಳಬೇಕಾಗಿ ವಿನಂತಿ .ಭಕ್ತರಿಗೆ ಪೂಜೆ ಇನ್ನಿತರ ಕಾರ್ಯಕ್ರಮ ಗಳು ಯಾವುದೇ ಇರುವುದಿಲ್ಲ ಎಂದು
ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.