
✍️ ರಾಧಾಕೃಷ್ಣ ಎರುಂಬು
ನೀವು ಚೆನ್ನಾಗಿದ್ದೀರಾ…? ಎಲ್ಲರೂ ಸಾಮಾನ್ಯವಾಗಿ ಮತ್ತು ಆತ್ಮೀಯವಾಗಿ ಕೇಳುವ ಮೊದಲ ಪ್ರಶ್ನೆ. ನಿರೀಕ್ಷಿತ ಉತ್ತರ ಚೆನ್ನಾಗಿದ್ದೇನೆ ಎಂಬುವುದೇ ಆಗಿದ್ದರೂ, ಆರೋಗ್ಯ ಸ್ವಲ್ಪ ಕೈಕೊಡುತ್ತಿದೆ ಎನ್ನುವುದೂ ಹಿಂಬಾಲಿತ ಉತ್ತರ. ಈ “ಆರೋಗ್ಯ” ವೆಂದರೆ ಮನುಷ್ಯನ ಆರು ಯೋಗ್ಯ ವ್ಯವಸ್ಥೆ . ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮಗಳ ಜೊತೆ ಮನಸ್ಸು.
ಈ ಮನಸ್ಸನ್ನು ಸ್ವಚ್ಛಗೊಳಿಸಲು ನೂರೆಂಟು ಹಾದಿಗಳು, ಕೆಲವೊಂದನ್ನು ದೂರ ಮಾಡಬೇಕು ಕೆಲವನ್ನು ಹತ್ತಿರವಾಗಿಸಬೇಕು. ಇದಕ್ಕೆ ಧನ-ಕನಕಾದಿಗಳು ಅತಿ ಅಲ್ಪ ಪ್ರಮಾಣದಲ್ಲಿ ಸಹಕಾರಿಯಾದಾವು ಬಿಟ್ಟರೆ, ದಿನಚರಿಯ ಅನುಷ್ಠಾನಗಳೇ ಕಾರಣವಾಗುವವುಗಳು. ಇದಕ್ಕಾಗಿ ನಮ್ಮ ಪೂರ್ವಜರ ಜೀವನ ಶೈಲಿ, ಆಹಾರ, ನೆಲೆಗಳು ಪೂರಕವಾಗಿದ್ದವು. ಇರಲಿ ಮತ್ತೆ ನಮಗೆ ವನವಾಸ ಮಾಡಲಾಗುತ್ತದೆಯೇ? ಹವ್ಯಾಸವಾಗಿದ್ದನ್ನು ವರ್ಜ್ಯ ಮಾಡಲಾಗುತ್ತದೆಯೇ? ಬರೆದರೂ…ಓದಿದರೂ.. ಓದಿಸಿದರೂ… ಇದು ಅಸಾಧ್ಯ. ಆದರೆ ಸರಿದೂಗಿಸಲು ನೂರೆಂಟು ಉತ್ತಮ ಆರೋಗ್ಯ ಸೂತ್ರಗಳನ್ನು ಭಗವಂತ ಹೇಳಿದ್ದಾನೆಂದು ಜ್ಞಾನೋದಯಗೊಂಡ ಋಷಿ ಮುನಿಗಳು, ಮಹಾತ್ಮರು, ಯತಿಗಳು, ಜ್ಞಾನಿಗಳು ಅನುಷ್ಠಾನಗೊಳಿಸಲು ಯತ್ನಿಸಿದ್ದಾರೆ.
ಈ ಆಚರಣೆ ಕಾಣುವುದಕ್ಕೆ ಭಗವಂತನಿಗೆ ಅರ್ಪಿತವಾಗುವಂತಿದ್ದರೂ ಸರ್ವರ ಸರ್ವಾರೋಗ್ಯ ಸುಧಾರಣೆಯಾಗುವುದಂತೂ ಖಂಡಿತ. ವೃತಾಚರಣೆ, ಉಪವಾಸ, ಭಗವತ್ ಪ್ರೀತ್ಯರ್ಥ ವಾರಾಚರಣೆಗಳಂತಹ ದೇಹ ದಂಡನೆಗಳಿಂದ ದೇಹದಲ್ಲಿ ಆಹಾರದ ಸಮತೋಲನವಾಗುವುದಂತೂ ಖಂಡಿತ.ಸಾತ್ವಿಕ ಆಹಾರಕ್ಕೆಂದೇ ನಿರ್ಮಿತ ಮಾನವ ದೇಹಕ್ಕೆ ರಾಜಸ ಮತ್ತು ತಾಮಸ ಆಹಾರ ಅಷ್ಟೊಂದು ಪಥ್ಯವಾಗುವುದಿಲ್ಲ ಎನ್ನುವುದು ಕಷ್ಟದಲ್ಲಾದರೂ ಒಪ್ಪುವಂತಹುದೆ. ಸತ್ಯನಾರಾಯಣ ವೃತ, ಶನೀಶ್ವರ ವೃತ, ಏಕಾದಶಿ ವೃತ, ಅಮಾವಾಸ್ಯೆ, ಹುಣ್ಣಿಮೆ, ಸಂಕಷ್ಟಿ, ಲಕ್ಷ್ಮೀವೃತ ಇವೆಲ್ಲ, ಒಂದು ದಿನಗಳ ವೃತವಾದರೆ, ಮಂಡಲ ವೃತ, ನವರಾತ್ರಿ ವೃತ ಸ್ವಲ್ಪ ದೀರ್ಘ ದಿನಗಳ ಆಚರಣೆ. ಇಲ್ಲೆಲ್ಲ ವ್ಯಕ್ತಿಗತ ಸ್ವಾಮಿತ್ವ ಮತ್ತು ಸಾಧುತ್ವಗಳ ಬದಲಾವಣೆ ಖಂಡಿತ ಕಾಣುತ್ತೇವೆ. ಹೀಗಿರುವ ವೃತಗಳಲ್ಲಿ ಚಾತುರ್ಮಾಸ್ಯವ್ರತ ವೂ ಒಂದು.
ಚಾತುರ್ಮಾಸ ಎಂದರೇನು?
ಶಾಸ್ತ್ರಗಳ ಪ್ರಕಾರ ಮಹಾವಿಷ್ಣುವು ಯೋಗನಿದ್ರೆ ಮಾಡುವ ಸಮಯವನ್ನು ಚಾತುರ್ಮಾಸ ಎಂದು ಕರೆಯುತ್ತಾರೆ. ಆಷಾಢ, ಶ್ರಾವಣ, ಭಾದ್ರಪದ ಮತ್ತು ಆಶ್ವಯುಜ ಮಾಸಗಳ ನಡುವೆ ಬರುವ ನಾಲ್ಕು ಮಾಸಗಳನ್ನು ಚಾತುರ್ಮಾಸ ಎನ್ನುತ್ತಾರೆ.ಈ ಬಾರಿ ಜುಲೈ 17, ಬುಧವಾರದಿಂದ ಚಾತುರ್ಮಾಸ ಪ್ರಾರಂಭವಾಗುತ್ತದೆ. ಇದು ನವೆಂಬರ್ 12, ಮಂಗಳವಾರ ಕೊನೆಗೊಳ್ಳುತ್ತದೆ.ಅಂದರೆ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಏಕಾದಶಿಯ ದಿನದಂದು ಪ್ರಾರಂಭವಾಗಿ ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಕೊನೆಗೊಳ್ಳುತ್ತದೆ. ಹೆಸರೇ ಹೇಳುವಂತೆ ನಾಲ್ಕು ತಿಂಗಳ ಆಚರಣೆಯಿದ್ದರೂ ಸಾಮಾನ್ಯರಿಗೆ ಅನುಕೂಲವಾಗುವಂತೆ ಎರಡು ತಿಂಗಳುಗಳಲ್ಲಿ, ನಾಲ್ಕು ಪಕ್ಷಗಳನ್ನು ನಾಲ್ಕು ಮಾಸಗಳಂತೆ ವೃತಾಚರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಆದರೆ ಸಾಧ್ಯವಾದರೆ ನಾಲ್ಕು ತಿಂಗಳ ವೃತಚಾರಣೆಯೇ ಅತ್ಯುತ್ತಮವೆಂಬುದು ಬಲ್ಲವರ ಅಭಿಪ್ರಾಯ.

ಚಾತುರ್ಮಾಸವೃತದ ಬಗ್ಗೆ ನಮ್ಮ ಕಲ್ಪನೆ:
ಸಾಮಾನ್ಯವಾಗಿ ಮಠಗಳ ಯತಿ ಪರಂಪರೆ ಆಚರಿಸುವ ಚಾತುರ್ಮಾಸ್ಯವು ಆ ಮಠಕ್ಕೆ ಸಂಬಂಧಿಸಿದ ಶಿಷ್ಯವರ್ಗ ಮತ್ತು ಆ ಸಮಾಜದ ಸಹಕಾರದಿಂದ ಸಂಬಂಧಿತ ಮಠಗಳಲ್ಲಿ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯೊಂದಿಗೆ ನಡೆಯುತ್ತದೆ. ಇದು ಕೆಲವೊಮ್ಮೆ ಯತಿವರ್ಯರಿಗೂ ಸ್ಥಳ ಮತ್ತು ಮಾನಸಿಕ ಬದಲಾವಣೆಗೆ ಹೇತುವಾಗುತ್ತದೆ. ಇದು ಮಠದ ಯಾ ಸಮಾಜದ ಆಚರಣೆಯಾದರೆ ವ್ಯಕ್ತಿಗತ ಬೇರೆಯೇ ಇರುತ್ತದೆ.
ವ್ಯಕ್ತಿಗತ ಚಾತುರ್ಮಾಸ್ಯ ಆಚರಣೆಯ ಬಗೆಗೆ:
ವ್ರತಕ್ಕೆ ಸಂಬಂಧಿಸಿದಂತೆ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಭಕ್ತನು ನಾಲ್ಕು ತಿಂಗಳುಗಳನ್ನು ಹೇಗೆ ಕಳೆಯಲು ಬಯಸುತ್ತಾನೆ ಎಂಬುದನ್ನು ಅವನಿಗೇ ನಿರ್ಧರಿಸಲು ಬಿಡಲಾಗುತ್ತದೆ. ವೈಷ್ಣವರು, ಶೈವರು, ಆಯಾಯ ಸ್ಥಳಗಳ ಅನುಕೂಲತೆಯಂತೆ ಬೇರೆ ಬೇರೆ ವಿಧಾನಗಳಲ್ಲಿ ಮತ್ತು ಮೇಲ್ಕಾಣಿಸಿದ ಮಾಸಗಳಿಗೆ 15 ದಿನಗಳ ಮೊದಲು ಯಾ ನಂತರದ ದಿನಗಳಲ್ಲಿ ಆಚರಿಸುತ್ತಾರೆ.ಈ ಆಚರಣೆಯನ್ನು ಪುರುಷ, ಸ್ತ್ರೀ ಮತ್ತು ಮಕ್ಕಳೂ ಆಚರಿಸಬಹುದು.ವೃತಕ್ಕೆ ತಿಂಗಳ ಸ್ತ್ರೀ ಸಮಸ್ಯೆಯೂ ಅಡ್ಡಿ ಪಡಿಸುವುದಿಲ್ಲ ಎಂಬುದು ಇದೆಯಾದರೂ ಆ ದಿನಗಳಲ್ಲಿ ದೇವತಾರಾಧನೆಯಿಂದ ದೂರವಿದ್ದರಾಯಿತು.
ವೃತಚಾರಣೆಯ ಸಂದರ್ಭ ನಿತ್ಯ ಅನುಷ್ಠಾನಗಳಲ್ಲಿ ಬದಲಾವಣೆ ಬೇಡ ಜೊತೆಯಲ್ಲಿ ಈ ಕೆಳಗಿನ ಆಚರಣೆಗಳಷ್ಟೇ ಸಾಕು.
- ಚಾತುರ್ಮಾಸದ ಸಮಯದಲ್ಲಿ ಶುಭ ಕಾರ್ಯಗಳನ್ನು ಹೊರತುಪಡಿಸಿ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು. ಮದುವೆ, ಕೇಶ ಮುಂಡನ, ಗೃಹಪ್ರವೇಶದಂಥ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
- ಈ ಅವಧಿಯಲ್ಲಿ ಕೂದಲು ಅಥವಾ ಗಡ್ಡವನ್ನು ಕತ್ತರಿಸಬಾರದು. ಇದರೊಂದಿಗೆ ಚಾತುರ್ಮಾಸದಲ್ಲಿ ದೂರ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು ಎಂದು ಶಾಸ್ತ್ರ ಹೇಳುತ್ತದೆ. ಅನಿವಾರ್ಯತೆಯಿದ್ದವರು ಯಾವುದಾದರೂ ಒಂದನ್ನು ಮಾತ್ರ ಅಳವಡಿಸಿಕೊಳ್ಳಬಹುದು.
- ಚಾತುರ್ಮಾಸದಲ್ಲಿ ಇಂಥದ್ದೇ ಆಹಾರ ಸೇವಿಸಬೇಕೆಂಬ ನಿಯಮವಿದೆ. ಚಾತುರ್ಮಾಸದಲ್ಲಿ ಆದಷ್ಟು ಸಾತ್ವಿಕ ಆಹಾರವನ್ನೇ ಸೇವಿಸಬೇಕು. ಈ ಸಮಯದಲ್ಲಿ, ಮಾಂಸ, ಮೀನು, ಮೊಟ್ಟೆ, ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತಾಮಸಿಕ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಆರೋಗ್ಯ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಉತ್ತಮವೆಂದು ಪರಿಗಣಿಸಲಾಗಿದೆ.
- ಚಾತುರ್ಮಾಸದಲ್ಲಿ ಮದ್ಯಪಾನ, ಧೂಮಪಾನ ಸೇರಿದಂತೆ ಕೆಟ್ಟ ಚಟಗಳಿಂದ ದೂರವಿದ್ದಷ್ಟೂ ಒಳ್ಳೆಯದು.
- ಜನರ ಬಳಿ ಕಟುವಾಗಿ ಮಾತನಾಡುವುದು, ಸುಳ್ಳು ಹೇಳುವುದು, ಹೊಟ್ಟೆಕಿಚ್ಚು ಪಡುವುದು ಬೇಡ.
- ಪ್ರಾಣಿಗಳನ್ನು ಹಿಂಸಿಸಬೇಡಿ. ಅದರ ಬದಲಿಗೆ ನಿಮ್ಮ ಕೈಲಾದರೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಅಥವಾ ಅನುಚಿತವಾದ ಮಾತುಗಳನ್ನಾಡುವುದು ಉಚಿತವಲ್ಲ.
- ಚಾತುರ್ಮಾಸದಲ್ಲಿ ಧಾರ್ಮಿಕ ಗ್ರಂಥಗಳನ್ನು ಓದಿದರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನಿಮಗೆ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ. ಜೊತೆಗೆ ವಿಷ್ಣು ಸಹಸ್ರನಾಮ ಪಠಿಸಿದರೆ ನಿಮಗೆ ಶುಭ ಫಲಿತಾಂಶ ದೊರೆಯುತ್ತದೆ. ಚಾತುರ್ಮಾಸ ದೀಕ್ಷೆ ತೆಗೆದುಕೊಳ್ಳುವವರು ನೆಲದ ಮೇಲೆ ಮಲಗಬೇಕು, ತಣ್ಣೀರು ಸ್ನಾನ ಮಾಡುವುದು ಸೂಕ್ತ ಮತ್ತೆ ನಿಮ್ಮ ಅನುಕೂಲತೆಗೆ ಬಿಟ್ಟಿದೆ ಎಂದೂ ಇದೆಯಾದರೂ ಆರಂಬಿಸಿದಂತೆ ಕೊನೆವರೆಗೂ ಇರುವುದು ಒಳ್ಳೆಯದು.
- ಹೊಂದಿಕೊಳ್ಳುವ ಉಪವಾಸವನ್ನು ಆಚರಿಸಬಹುದು – ಕೇವಲ ಒಂದು ಅಥವಾ ಎರಡು ಊಟವನ್ನು ಅಥವಾ ತಿಂಗಳ ನಿರ್ದಿಷ್ಟ ದಿನಗಳಲ್ಲಿ ಕೇವಲ ಒಂದು ಊಟವನ್ನು ಮಾಡುವುದು.
- ನಾಲ್ಕು ತಿಂಗಳಲ್ಲಿ ಯಾವುದಾದರೂ ಒಂದು ತಿಂಗಳಲ್ಲಿ ಬೆಲ್ಲ ಅಥವಾ ಎಣ್ಣೆಯಂತಹ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸಲಾಗುತ್ತದೆ. ಕೆಲವರು ಉಪ್ಪು ಮತ್ತು ಸಿಹಿ ಸಿದ್ಧತೆಗಳನ್ನು ತಪ್ಪಿಸುತ್ತಾರೆ.ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಪ್ಪಿಸುತ್ತಾರೆ ಏಕೆಂದರೆ ಅದು ಅನಗತ್ಯ ಉತ್ಸಾಹವನ್ನು ಪ್ರಚೋದಿಸುತ್ತದೆ.
- ನಾಲ್ಕನೇ ತಿಂಗಳ ಅವಧಿಯಲ್ಲಿ ಹೆಚ್ಚಿನ ಜನರು ಮಹಾಭಾರತ ಅಥವಾ ರಾಮಾಯಣ ಅಥವಾ ಗೀತೆ ಅಥವಾ ಭಗವದ್ ಪುರಾಣವನ್ನು ಓದಲು ನಿರ್ಧರಿಸಿದರು. ಕೆಲವರು ಪ್ರತಿನಿತ್ಯ ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬಹುದು.
- @ಶ್ರಾವಣ ಮಾಸದಲ್ಲಿ – ಹಸಿರು ಎಲೆಗಳ ತರಕಾರಿಗಳನ್ನು ತಪ್ಪಿಸುತ್ತಾರೆ.(ಶಾಕ ವ್ರತ) @ಭಾದ್ರಪದ ಮಾಸದಲ್ಲಿ ಮೊಸರು ಅಥವಾ ಮೊಸರನ್ನು ಸೇವಿಸಬಾರದು.(ದಧಿ ವ್ರತ)
@ಅಶ್ವಿನಿ ಮಾಸದಲ್ಲಿ ಹಾಲನ್ನು ತ್ಯಜಿಸಲಾಗುತ್ತದೆ.(ಕ್ಷೀರ ವ್ರತ)
@ಕಾರ್ತಿಕ ಮಾಸದಲ್ಲಿ ದ್ವಿದಳ ಧಾನ್ಯಗಳನ್ನು ತಪ್ಪಿಸಲಾಗುತ್ತದೆ.(ದ್ವಿದಳ ವ್ರತ)
13.ಮತ್ತೆ ಆಹಾರದ ಬಗ್ಗೆ ಯಾವುದೇ ಕಟ್ಟುನಿಟ್ಟಾದ ಕೋಡ್ಗಳಿಲ್ಲ. ಇದು ಚಾತುರ್ಮಾಸ್ಯ ವ್ರತವನ್ನು ಹೇಗೆ ಆಚರಿಸಲು ಬಯಸುತ್ತದೆ ಎಂಬುದರ ಮೇಲೆ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. - ಆಷಾಢ ಮಾಸದ ಎಲ್ಲ ಶುಕ್ರವಾರಗಳಲ್ಲೂ ವಿಶೇಷ ಪೂಜೆ ಮಾಡಿಕೊಳ್ಳುವುದು ನಿಮ್ಮ ಅನುಕೂಲತೆಯಂತೆ.
- ಕಾರ್ತಿಕ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆ.
- ಶೈವಾರದಕರು 4 ತಿಂಗಳ 16 ಸೋಮವಾರಗಳಲ್ಲಿ ಆಹಾರ ವರ್ಜಿಸಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
- ಶ್ರೀಧರ, ಹೃಷಿಕೇಶ, ಪಧ್ಮನಾಭ ಮತ್ತು ದಾಮೋದರ ಚಾತುರ್ಮಾಸದ ಅಭಿಮಾನಿ ದೇವರುಗಳು
- ವೃತಾ ಮಾಸಗಳಲ್ಲಿ ಈ ಕೆಳಗಿನ ವೃತ ಸಂಕಲ್ಪ ಮಾಡಿಕೊಳ್ಳಬಹುದು.
ಲಕ್ಷ ಪ್ರದಕ್ಷಿಣೆ
ಲಕ್ಷ ತುಳಸೀ ಅರ್ಪಣೆ
ವಿಷ್ಣು ಸಹಸ್ರನಾಮ
ಇಷ್ಟ ದೇವರ ಅಷ್ಟೋತ್ತರ
ಸಂಧ್ಯಾ ಕಾಲದಲ್ಲಿ ತುಪ್ಪದ ದೀಪವನ್ನು ಹಚ್ಚುವುದು
ನಿತ್ಯವೂ ಸ್ತೋತ್ರಗಳನ್ನು ಹೇಳುವುದು
ನೆಲದ ಮೇಲೆ ಕೇವಲ ಚಾಪೆ ಹಾಸಿ ಮಲಗಿದರೆ ಅದು ಒಂದು ವ್ರತ
ಮೌನವ್ರತ
ವಿಶೇಷ ದಿನಗಳಲ್ಲಿ ಉಪವಾಸ ಮಾಡ ಬಹುದು
ಶುಕ್ರವಾರ ಮಂಗಳವಾರ ಹುಣ್ಣಿಮೆ ಅಮಾವಾಸ್ಯೆ ಗಳಲ್ಲಿ ಲಕ್ಷ್ಮೀ ದುರ್ಗೇ ಗೌರಿ ಸ್ವರೂಪದಲ್ಲಿ ಪೂಜೆಯನ್ನು ಮಾಡಬಹುದು.
ಯತಿವರ್ಯ ರಿಗೆ ;ಸಮಾಜದ ಗುರುಪೀಠ ಗಳಲ್ಲಿನ ಗುರುಗಳಿಗೆ ಭಿಕ್ಷಾ ಪೂಜೆಯನ್ನು ಸಲ್ಲಿಸುವುದು.
ಜಪ ತಪ ಪಾರಾಯಣ ತೀರ್ಥಸ್ನಾನ ಬ್ರಾಹ್ಮೀಮುಹೂರ್ತದಲ್ಲಿ ತಣ್ಣೀರ ಸ್ನಾನ
ಸತ್ಸಂಗ ಪುರಾಣಗಳ ಶ್ರವಣ
ಪುರೋಹಿತರಿಗೆ ಬ್ರಾಹ್ಮಣರಿಗೆ ಸುಮಂಗಲಿಯರಿಗೆ
ಸತ್ಪಾತ್ರರಿಗೆ ಯೋಗ್ಯ ದಾನ ಮಾಡುವುದು
ಭಾಗವತ ಭಗವದ್ಗೀತೆ ಗಳ ಪಾರಾಯಣ ಪ್ರವಚನ - ಶುಚಿಯಾದ ಪೂಜಾ ಪರಿಕರಗಳ ಜೊತೆ ಮನೆಯ ಪುಷ್ಪಗಳಿಂದ ಸಂಕಲ್ಪ ನೆನಪಿಸಿ ದೀಪ ಹಚ್ಚಿ ಪೂಜಿಸುವುದು. ದಿನ ಯಾ ವಾರಕ್ಕೊಮ್ಮೆ ಭಜನೆಯಿರಲಿ.
ಇತರ ಮಾಹಿತಿಗಳು
ಚಾತುರ್ಮಾಸದ ಮೊದಲ ತಿಂಗಳು, ಶ್ರಾವಣವು ಭಗವಾನ್ ಶಿವನಿಗೆ ಮೀಸಲಾಗಿದೆ, ವಿಶೇಷವಾಗಿ ಸೋಮವಾರಗಳು. ಮುಂದಿನ ತಿಂಗಳು ಭಾದ್ರಪದ, ಗಣೇಶ ಚತುರ್ಥಿ ಮತ್ತು ಕೃಷ್ಣ ಅಷ್ಟಮಿ ಸೇರಿದಂತೆ ಹಬ್ಬಗಳ ತಿಂಗಳು. ನಂತರ ಅಶ್ವಿನಿ ತಿಂಗಳು ಬರುತ್ತದೆ ಮತ್ತು ಪ್ರಮುಖ ಹಬ್ಬಗಳೆಂದರೆ, ದುರ್ಗಾ ಪೂಜೆ, ನವರಾತ್ರಿ, ದೀಪಾವಳಿ ಇತ್ಯಾದಿ. ಅಂತಿಮವಾಗಿ, ಕಾರ್ತಿಕ, ದೀಪಾವಳಿ ಆಚರಣೆಗಳು ಈ ತಿಂಗಳಲ್ಲಿ ಕೊನೆಗೊಳ್ಳುತ್ತವೆ.
ಹಿಂದೂ ಧರ್ಮಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಮುಖ ಹಬ್ಬಗಳು ಕೃಷಿ ಮತ್ತು ವಿಶೇಷವಾಗಿ ಸುಗ್ಗಿಯ ಕಾಲದೊಂದಿಗೆ ನಿಕಟ ಸಂಬಂಧ ಹೊಂದಿವೆ. ಮಾನ್ಸೂನ್ ಮಳೆಯು ಸಂತೋಷ, ಹಸಿರು ಮತ್ತು ತಾಜಾ ಗಾಳಿಯನ್ನು ತರುತ್ತದೆ ಮತ್ತು ನಾಲ್ಕು ತಿಂಗಳುಗಳು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಆಚರಣೆಗಳು, ಪೂಜೆಗಳು ಮತ್ತು ಹಬ್ಬಗಳಿಗೆ ಸೂಕ್ತವಾಗಿದೆ.
ದೇವಶಕ್ತಿ ನಮ್ಮಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವ ಧೀ:ಶಕ್ತಿ. ಬೇಡರ ಕಣ್ಣಪ್ಪನಿಗೂ ಒಲಿದ, ಪ್ರಹ್ಲಾದನಿಗೂ ಜೀವಧಾನ ಮಾಡಿದ, ಶಬರಿಗೂ ಮೆಚ್ಚಿದವ. ನಮ್ಮ ಶುದ್ಧಆಚರಣೆ ನಮ್ಮ ದೇಹದ ಆರೋಗ್ಯಕ್ಕೆ ವರದಾನ. ಮನಸ್ಸು ಆತ್ಮಗಳ ಶುದ್ಧತೆಯೇ ಅವನ ನೆಲೆ. ಸದಾ ಹೃದಯಭಾಗದ ಆತ್ಮ ಮುಟ್ಟಿ ನಮಸ್ಕರಿಸಿ ಲೋಕಸಮಸ್ತ ಸುಖಿನೋಭವಂತು ಎಂದು. ದೀಪ ಹಚ್ಚಿ ದಾರಿ ತೋರಿದರೆ ನಮ್ಮನ್ನೂ ಬೆಳಕ ತೋರಿ ನಡೆಸಿಯಾನು.
ಸಂಗ್ರಹಿತ ಬರಹ:-
✍️ ರಾಧಾಕೃಷ್ಣ ಎರುಂಬು
ಆಡಳಿತಾಧಿಕಾರಿ,ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿಟ್ಲ