ಇವರು ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಹಾಡಿದ ಒಂದು ನಿಮಿಷದ ವಿಡಿಯೋವನ್ನು ವೀಕ್ಷಿಸಿ, ಲೈಕ್, ಶೇರ್ ಮತ್ತು ಕಮೆಂಟ್ ಮಾಡಿ..



ವಿಟ್ಲ: ಕರಾವಳಿಯ ಅದ್ಭುತ ಗಾನ ಪ್ರತಿಭೆ, ಹಲವಾರು ವೇದಿಕೆಗಳಲ್ಲಿ ಗಾಯನದ ಮೂಲಕ ಪ್ರಸಿದ್ದಿ ಪಡೆದ ವಿಟ್ಲದ ಪ್ರತಿಭೆ ದಿವ್ಯನಿಧಿ ರೈ ಎರುಂಬು ಅಳಿಕೆ ಇವರು ಝೀ ಕನ್ನಡದ ಬಿಗ್ ರಿಯಾಲಿಟಿ ಶೋ ಸರಿಗಮಪ ವೇದಿಕೆಗೆ ನಾಲ್ಕನೇ ಸುತ್ತಿಗೆ ಆಯ್ಕೆಯಾಗಿರುತ್ತಾರೆ.
ಕರಾವಳಿಯಾದ್ಯಂತ ಹಲವಾರು ಮಹಾನ್ ಕಲಾವಿದರೊಂದಿಗೆ ಗಾಯನದ ವೇದಿಕೆಯನ್ನು ಹಂಚಿಕೊಂಡ ದಿವ್ಯನಿಧಿ ರೈಯವರು ತನ್ನ ಹಾಡಿನ ಜೊತೆಗೆ ಹಾರ್ಮೋನಿಯಂ ನುಡಿಸಿ ತನ್ನದೇ ವಿಶಿಷ್ಟ ಶೈಲಿಯ ಗಾಯನದ ಮೂಲಕ ಜನ ಮೆಚ್ಚುಗೆ ಪಡೆದವರು.
ಇದೀಗ ಕರ್ನಾಟಕದ ಎಲ್ಲರ ಮೆಚ್ಚಿನ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ವೇದಿಕೆಯ ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಒಂದು ನಿಮಿಷದ ಹಾಡಿನ ಮೂಲಕ ಮುಂದಿನ ಹಂತಕ್ಕೆ ಹೆಜ್ಜೆ ಇಡಲು ಮುಂದಾಗಿದ್ದು, ಎಲ್ಲರೂ ಈ ವಿಡಿಯೋ ವೀಕ್ಷಿಸಿ ಶೇರ್ ಮಾಡಿ ಲೈಕ್ ಕೊಟ್ಟು ಸರಿಗಮಪ ವೇದಿಕೆಯಲ್ಲಿ ನಮ್ಮ ವಿಟ್ಲದ ಪ್ರತಿಭೆ ದಿವ್ಯನಿಧಿ ರೈಯವರಿಗೆ ಅವಕಾಶ ಸಿಗುವಲ್ಲಿ ನಾವೆಲ್ಲರೂ ಸಹಕರಿಸೋಣ