ಬೆಂಗಳೂರು: ಮೊದಲಿಗೆ ಹೆಂಡತಿ ಚೆಂದವಾದ ಯುವತಿಯರನ್ನ ಫೇಸ್ಬುಕ್ ನಲ್ಲಿ ಪರಿಚಯ ಮಾಡ್ಕೊಳ್ತಾಳೆ. ಹಬ್ಬಕ್ಕೆ ಮನೆಗೆ ಬನ್ನಿ ಎಂದು ಕರೆದು ಜ್ಯೂಸ್ ಕೊಡ್ತಾಳೆ. ಬಳಿಕ ಮನೆಗೆ ಬಂದ ಯುವತಿಯರ ಅಶ್ಲೀಲ ಫೋಟೋ ಶೂಟ್ ಮಾಡಿಕೊಂಡ ಗಂಡ ಹಣಕ್ಕೆ ಡಿಮ್ಯಾಂಡ್ ಮಾಡ್ತಾನೆ.
ಈ ರೀತಿ ಅಮಾಯಕ ಯುವತಿಯರನ್ನ ಹನಿಟ್ರ್ಯಾಪ್ ಮಾಡೊ ಚಂದ್ರಾಲೇಔಟ್ ನ ಕಾವ್ಯ ಮತ್ತು ಕೃಷ್ಣ ಎಂಬ ಖರ್ತನಾಕ್ ಕಪಲ್ಸ್ ವಿರುದ್ಧ ಚಂದ್ರಾಲೇಔಟ್ ಸ್ಟೇಷನ್ ನಲ್ಲಿ ಕೇಸ್ ಬುಕ್ ಆಗಿದೆ.
ಚಂದ್ರಾಲೇಔಟ್ ನ ಯುವತಿಗೆ ಫೇಸ್ ಬುಕ್ ಯಲ್ಲಿ ಕಾವ್ಯ ಎಂಬಾಕೆಯ ಪರಿಚಯವಾಗುತ್ತದೆ. ಬಳಿಕ ಹಬ್ಬಕ್ಕೆ ಮನೆಗೆ ಬಾ ಎಂದು ಸಂತ್ರಸ್ತೆ ಯುವತಿಯನ್ನ ಕಾವ್ಯ ಮನೆಗೆ ಕರೆಯುತ್ತಾಳೆ. ಫೇಸ್ ಬುಕ್ ಗೆಳತಿ ಕರೆದಳು ಎಂದು ಚಂದ್ರಾಲೇಔಟ್ ನ ಮನೆಗೆ ತೆರಳಿದ ಸಂತ್ರಸ್ತೆ ಯುವತಿಗೆ ಮೊದಲಿಗೆ ಕುಡಿಯಲಿಕ್ಕೆ ಜ್ಯೂಸ್ ಕೊಟ್ಟಿದ್ದಾಳೆ. ಜ್ಯೂಸ್ ಕುಡಿದ ಬಳಿಕ ನಿದ್ರಾ ಸ್ಥಿತಿಗೆ ಹೋದ ಯುವತಿಯನ್ನ ಕಾವ್ಯಳ ಗಂಡ ಕೃಷ್ಣ ವಿವಸ್ತ್ರಗೊಳಿಸಿ ಯುವತಿಯ ಜೊತೆ ಪೊಟೊಸ್ ಗೆ ಫೊಸ್ ಕೊಟ್ಟಿದ್ದಾನೆ. ಈ ಇಬ್ಬರ ಫೋಟೋಗಳನ್ನು ಸಾಗರ್ ಎಂಬಾತ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದಾನೆ.
ಬಳಿಕ ಈ ಖಾಸಗಿ ಫೋಟೋ, ವಿಡಿಯೋಗಳನ್ನಿಟ್ಟುಕೊಂಡು ಸಾಗರ್ ಮತ್ತು ಕೃಷ್ಣ ಹಣಕ್ಕೆ ಡಿಮ್ಯಾಂಡ್ ಮಾಡಿ ಯುವತಿ ಬಳಿಯಲ್ಲಿದ್ದ ಚಿನ್ನದ ಉಂಗುರ, ಚಿನ್ನದ ಚೈನ್, ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ.
ಈ ವಿಚಾರ ಹೊರಗೆ ಬಾಯಿಬಿಟ್ಟರೆ ಖಾಸಗಿ ಫೋಟೋ ಮತ್ತು ವಿಡಿಯೋವನ್ನು ಪೊಷಕರಿಗೆ ಕಳಿಸ್ತೀವಿ ಎಂದು ಕಳೆದ ಆರು ತಿಂಗಳಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ.
ಬಳಿಕ ಕಳೆದ ಮೇ ತಿಂಗಳಲ್ಲಿ ಯುವತಿಯ ಹಳೆ ವಿಡಿಯೋ ತೋರಿಸಿ ಎರಡನೇ ಬಾರಿಗೆ ಲೈಂಗಿಕ ಕಿರುಕುಳ ನೀಡಿದ ಕೃಷ್ಣ, ಕೇಳಿದಷ್ಟು ಹಣ ಕೊಟ್ಟರೇ ಸರಿ, ಇಲ್ಲವಾದರೆ ವಿಡಿಯೋ ಮತ್ತು ಫೋಟೋ ವೈರಲ್ ಮಾಡೊದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆರೋಪಿಗಳ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.