Saturday, June 28, 2025
spot_imgspot_img
spot_imgspot_img

ಮಂಗಳೂರು : ಹಿಂದೂ ಯುವತಿಗೆ ಮುಸ್ಲಿಂ ಯುವಕನಿಂದ ಅಶ್ಲೀಲ ಮೆಸೇಜ್ ಕಿರುಕುಳ ಪ್ರಕರಣ : ಆರೋಪಿ ಶಾರೀಕ್ ಅರೆಸ್ಟ್‌…!

- Advertisement -
- Advertisement -

ಮಂಗಳೂರು : ಸುರತ್ಕಲ್ ಇಡ್ಯಾ ನಿವಾಸಿ ಹಿಂದೂ ಯುವತಿ ಒಬ್ಬಳಿಗೆ ಫೇಸ್ಟುಕ್ ಮೆಸೆಂಜರ್ ಮೂಲಕ ಅಶ್ಲೀಲ ಮೆಸೇಜ್ ಮಾಡಿ ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆ ಹಾಕಿದ ಯುವಕನ ವಿರುದ್ಧ ಕ್ಷಿಪ್ರ ಕ್ರಮವನ್ನು ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ದೂರಿನ ಹಿನ್ನೆಲೆ ಇಡ್ಯಾ ಗ್ರಾಮದ ಶಾರೀಕ್ ಎಂಬಾತನನ್ನು ಬಂಧಿಸಲಾಗಿದೆ.

ಯುವತಿಗೆ ಹಾಗೂ ಯುವತಿಯ ಸಹೋದರನಿಗೆ ಮುಸ್ಲಿಂ ವ್ಯಕ್ತಿಯ ಪ್ರೋಪೈಲ್ ನಿಂದ ಬೆದರಿಕೆ ಮೆಸೇಜ್ ಬಂದಿದ್ದು ಅದರಲ್ಲಿ ನನ್ನೊಂದಿಗೆ ಸಹಕರಿಸದಿದ್ದರೇ. ಅತ್ಯಾಚಾರ ಎಸಗಿ ತುಂಡು ತುಂಡಾಗಿ ಕತ್ತರಿಸಿ ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿದೆ.

ಪೊಲೀಸರು ಈ ಹಿಂದೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ, ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ ಮಾಡಿದ್ದರು. ಆದರೆ, ಕಿರುಕುಳ ಮುಂದುವರೆದಿದ್ದರಿಂದ ಮನನೊಂದು ಯುವತಿ ಈ ದಾರುಣ ನಿರ್ಧಾರಕ್ಕೆ ದಾರಿ ಹಿಡಿದಿದ್ದಾರೆ.

ಈ ಪ್ರಕರಣದ ಬಗ್ಗೆ ಸಾಮಾಜಿಕ ಮಾದ್ಯಮದಲ್ಲಿ ವರದಿ ಬಿತ್ತರಿಸಿದ ಹಿನ್ನೆಲೆ ಹಿಂದೂ ಸಂಘಟನೆ ಹೆಚ್ಚೆತ್ತು ಹೋರಾಟ ನಡೆಸುವ ಸೂಚನೆ ನೀಡುವ ಮುನ್ನಲೆ ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಈ ಗಂಭೀರ ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ 78, 352, 351 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66C, 66D ಮತ್ತು 67A & B ಸೆಕ್ಷನ್ ಅಡಿ ದಾಖಲಿಸಿದೆ.ಪೋಲೀಸರ ಬೇಜಾಬ್ದಾರಿಯ ತನಿಖೆಯಿಂದಾಗಿ ಆರೋಪಿ ಮನೆಗೆ ಹೊರಡಿದ್ದು ಬಳಿಕ ಶಾರೀಕನನ್ನು ವಿಚಾರಣೆಗಾಗಿ ಠಾಣೆಗೆ ಕರೆಯಲಾಗಿದ್ದು, ಅವರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ ಆತನ ಮೊಬೈಲ್ ನಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

- Advertisement -

Related news

error: Content is protected !!