ಚಿಕ್ಕಮಗಳೂರು: ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಸಾವು ಅನಿರೀಕ್ಷಿತವಾಗಿದ್ದು. ದುರ್ದೈವದ ಸಂಗತಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಧರ್ಮೇಗೌಡರ ಸಾವಿಗೆ ಸಂತಾಪ ಸೂಚಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಡಿ.05 ರಂದು ರಾಜ್ಯದ ವಿಧಾನಪರಿಷತ್ ನಲ್ಲಿ ನಡೆದ ಗದ್ದಲದ ಸಂದರ್ಭದಲ್ಲಿ ನಾನು ತಮಿಳುನಾಡಿನಲ್ಲಿದ್ದೆ. ಘಟನೆ ಬಳಿಕ ನಾನು ಅವರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದೆ. ಆ ವೇಳೆ ಇರಲಿ ಬಿಡಿ ಬ್ರದರ್ ಎಂಬಂತೆಯೇ ಮಾತನಾಡಿದ್ದರು. ಆದರೆ ಅವರ ಸಾವು ಅನಿರಿಕ್ಷೀತವಾಗಿದ್ದು, ದುರ್ದೈವದ ಸಂಗತಿ ಎಂದರು.
ಆತ್ಮಹತ್ಯೆ ಕುರಿತಂತೆ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ. ಕುಟುಂಬ ಸದಸ್ಯರ ಕ್ಷಮೆ ಕೇಳಿ, ಸದನದಲ್ಲಿ ನಡೆದ ಘಟನೆಯಿಂದ ಉಂಟಾದ ನೋವಿನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೆಲ ಆಸ್ತಿಯ ವಿವರಗಳ ಮಾಹಿತಿ ಕೂಡ ದಾಖಲಿಸಿದ್ದಾರೆ. ಅವರ ತಂದೆಯವರು ಶಾಸಕರಾಗಿದ್ದರು, ಇವರು ಕೂಡ ಶಾಸಕರಾಗಿ ಆಯ್ಕೆಯಾಗಿದ್ದರು, ರಾಜಕೀಯದಲ್ಲಿ ಇಂತಹ ಘಟನೆಗಳನ್ನು ಎದುರಿಸಿ ನಿಲ್ಲುತ್ತಾರೆ ಎಂದು ಭಾವಿಸಿದ್ದೆವು. ಆದರೆ ಇಂತಹ ನಿರ್ಧಾರ ದುರದೃಷ್ಟಕರ ಎಂದು ಸಿಟಿ ರವಿ ಹೇಳಿದರು.