Monday, April 29, 2024
spot_imgspot_img
spot_imgspot_img

ಸಿಲಿಂಡರ್ ಸ್ಫೋಟ – ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ ಕೊನೆಯುಸಿರು

- Advertisement -G L Acharya panikkar
- Advertisement -

ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ, ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಚಿರಪರಿಚಿತರಾಗಿದ ರಮೇಶ್ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ರಮೇಶ್ ಕೊಡಗು ಜಿಲ್ಲೆಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್‌ನ ಆಶ್ರಮ ಸ್ಥಾಪಿಸಿದ್ದರು. ಕಳೆದ 8 ವರ್ಷಗಳಿಂದ ನೂರಾರು ಅನಾಥರಿಗೆ, ವೃದ್ಧರಿಗೆ, ನಿರ್ಗತಿಕರಿಗೆ ಆಸರೆಯಾಗಿದ್ದರು.
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ರಮೇಶ್ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ರಮೇಶ್ ತಮ್ಮ ಪತ್ನಿ, ಮೂವರು ಹೆಣ್ಣು ಮಕ್ಕಳು, ತಂದೆ ಹಾಗೂ ಆಶ್ರಮದಲ್ಲಿ ತಾವು ಆಸರೆಯಾಗಿದ್ದ 36 ಅನಾಥರನ್ನು ಅಗಲಿದ್ದಾರೆ

- Advertisement -

Related news

error: Content is protected !!