Saturday, June 28, 2025
spot_imgspot_img
spot_imgspot_img

ದಾವಣಗೆರೆ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ಅಧಿಕಾರಿಗಳು..!

- Advertisement -
- Advertisement -

ದಾವಣಗೆರೆ: ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಲೋಕಾಯುಕ್ತರ ಬಲೆಗೆ ಬಲೆಗೆ ಬಿದ್ದ ಕಂದಾಯ ಅಧಿಕಾರಿಗಳನ್ನು ಬಿ.ಅನ್ನಪೂರ್ಣ ಹಾಗೂ ಎಸ್‌ಡಿಎ ಲಕ್ಕಪ್ಪ ವೈ ಎನ್ನಲಾಗಿದೆ.

ದಾವಣಗೆರೆ ನಗರದ ಬೇತೂರ ರಸ್ತೆಯ ನಿವಾಸಿ ಚಂದ್ರಶೇಖರ ಎಂಬುವರಿಂದ ಹಿಟ್ಟಿನ ಗಿರಣಿ ಮನೆಗೆ ಇ- ಸ್ವತ್ತು ಮಾಡಿಕೊಡಲು 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯಕ್ತರ ಬಲೆಗೆ ಬಿದ್ದಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್‌ ಕೌಲಾಪೂರೆ ನೇತೃತ್ವದಲ್ಲಿ, ಡಿವೈಎಸ್ಪಿ ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಎಚ್. ಎಸ್. ರಾಷ್ಟ್ರಪತಿ, ಪ್ರಭು ಸೂರಿನ್ ದಾಳಿ ನಡೆಸಿದ್ದಾರೆ.

- Advertisement -

Related news

error: Content is protected !!