Sunday, June 29, 2025
spot_imgspot_img
spot_imgspot_img

ವಿಟ್ಲ: ಹಣದ ವಿಚಾರದಲ್ಲಿ ಮಾರಣಾಂತಿಕ ಹಲ್ಲೆ : ಗಾಯಾಳು ಗಣೇಶ್‌ ಗಂಭೀರ, ಆಸ್ಪತ್ರೆಗೆ ದಾಖಲು- ಅನೇಕ ಜನರಿಗೆ ಪಂಗನಾಮ ಹಾಕಿದ ಆಲಿ ಎಂಬವನಿಂದ ಕೃತ್ಯ

- Advertisement -
- Advertisement -

ವಿಟ್ಲ : ವ್ಯಕ್ತಿಯೊಬ್ಬರಿಗೆ ಹಣದ ವಿಚಾರವಾಗಿ ಮಾರಕಾಯುಧದಿಂದ ದಾಳಿ ನಡೆಸಿದ ಘಟನೆ ಕೇಪು ಗ್ರಾಮದ ಎದುರುಕಜೆ ಎಂಬಲ್ಲಿ ನಡೆದಿದೆ.

ಎದುರುಕಜೆ ನಿವಾಸಿ ಆಲಿ ಎಂಬಾತನು ಗಣೇಶ ಎಂಬವರಿಗೆ ಮಾರಕಾಯುಧದಿಂದ ದಾಳಿ ನಡೆಸಿದ್ದಾನೆ. ಆಲಿಯು ಸ್ಥಳೀಯರೊಂದಿಗೆ ಹಣಕಾಸಿನ ವಿಚಾರವಾಗಿ ಸುಮಾರು ಜನರಿಗೆ ಪಂಗನಾಮ ಹಾಕಿದ್ದಾನೆ. ಅಲ್ಲದೆ ಈತನ ಹಣಕಾಸಿನ ವಿಚಾರದಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿರುತ್ತದೆ.

ಗಣೇಶ ಎಂಬವರೊಂದಿಗೆ ಆಲಿಯು ವ್ಯವಹಾರ ಹೊಂದಿದ್ದು, ಗಣೇಶರವರಿಗೆ ನಾಳೆ ನಡೆಯುವ ಶುಭ ಕಾರ್ಯದ ನಿಮಿತ್ತ ಆಲಿಯು ತೆಗೆದುಕೊಂಡ ಹಣವನ್ನು ಮರುಪಾವತಿಗೆ ಕೇಳಿದಾಗ, ಗಣೇಶರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ಹಣ ಕೊಡುವುದಿಲ್ಲ ತಾಕತ್ತಿದ್ದರೆ ವಸೂಲಿ ಮಾಡು ಎಂದು ದರ್ಪದಿಂದ ಹೇಳಿ, ಆಟೋದಲ್ಲಿದ್ದ ತಲವಾರು ತೆಗೆದು ಗಣೇಶರವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಗಣೇಶ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಇದೆ.

ಇನ್ನು ಆಲಿ ಕೂಡ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!