- Advertisement -
- Advertisement -


ಶಿರಸಿ: ಉತ್ತರಕನ್ನಡದ ಶಿರಸಿಯಲ್ಲಿ ಅಡಿಕೆ ಸುಳಿಯುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟ ಮಹಿಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭಾ ಹೊಸಬಾಳೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಅಡಿಕೆ ತೆಗೆಯುವ ಕೆಲಸ ಮಾಡಲು ಇತರ ಕೆಲಸದವರನ್ನೂ ನೇಮಕ ಮಾಡಿಕೊಂಡಿದ್ದರು. ಈ ಸಂದರ್ಭ ಅವರ ಕೆಲಸವನ್ನು ಗಮನಿಸಲು ಶೋಭಾ ಹೋಗಿದ್ದಾರೆ.ಆಗ ಅವರ ಸೀರೆ ಅಡಿಕೆ ಸುಳಿಯುವ ಯಂತ್ರಕ್ಕೆ ಸಿಲುಕಿಕೊಂಡಿದ್ದು ಏಕಾಏಕಿ ಯಂತ್ರ ಅವರನ್ನು ಎತ್ತಿ ಬಿಸಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ.ಘಟನೆಯಿಂದ ತೀವ್ರ ರಕ್ತಸ್ರಾವವಾಗಿ ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
- Advertisement -