Sunday, June 29, 2025
spot_imgspot_img
spot_imgspot_img

ಒಬ್ಬ ಶ್ರೇಷ್ಠ ನಾಯಕನ ಜೊತೆ ಅದ್ಭುತ ಕ್ರಿಕೆಟಿಗನ ನಿವೃತ್ತಿ.– ಧೋನಿ ವಿದಾಯಕ್ಕೆ ಕಿಚ್ಚ ಸುದೀಪ್ ಬೇಸರ.

- Advertisement -
- Advertisement -

ಬೆಂಗಳೂರು:  ಒಬ್ಬ ಶ್ರೇಷ್ಠ ನಾಯಕನ ಜೊತೆ ಅದ್ಭುತ ಕ್ರಿಕೆಟಿಗನ ನಿವೃತ್ತಿಯಾಗಿದ್ದಾರೆ ಎಂದು ಕಿಚ್ಚ ಸುದೀಪ್ ಅವರು ಎಂಎಸ್ ಧೋನಿಯವರ ವಿದಾಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ತಂದ ಹೆಮ್ಮೆಯ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶನಿವಾರ ಸಂಜೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಂದು ಸುಳಿವನ್ನು ನೀಡದೇ ಧೋನಿ ನಿವೃತ್ತಿ ಘೋಷಿಸಿದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ವಿದಾಯ ಪಂದ್ಯವನ್ನೂ ಆಡದೇ ಧೋನಿ ನಿವೃತ್ತಿ ಹೇಳಿರುವುದು ಸುದೀಪ್‌ಗೆ ಬೇಸರ ತಂದಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಅದ್ಭುತ ಕ್ರಿಕೆಟಿಗನ ಜೊತೆಗೆ, ಒಬ್ಬ ಶ್ರೇಷ್ಠ ನಾಯಕ ಹಠಾತ್ತನೆ ನಿವೃತ್ತಿಗೊಂಡಿದ್ದಾರೆ. ನನಗೆ ಅನಿಸುತ್ತದೆ ನಾವೆಲ್ಲರೂ ಅವರ ಕೊನೆಯ ಪಂದ್ಯವನ್ನೂ ನೋಡಬೇಕಿತ್ತು ಎಂದು. ಯಾರಿಗೂ ಕೂಡ ಅವರು ನಿವೃತ್ತಿ ಹೊಂದುತ್ತಾರೆ ಎಂದು ಗೊತ್ತೇ ಆಗಲಿಲ್ಲ. ಅವರ ಅಭಿಮಾನಿಗಳಿಗೆ ಅವರ ನಿವೃತ್ತಿ ವಿಚಾರ ಗೊತ್ತಿತ್ತು ಎಂದು ಭಾವಿಸುತ್ತೇನೆ. ಜೊತೆಗೆ ಅವರಿಗೆ ವಿದಾಯ ಪಂದ್ಯದ ಜೊತೆ ಅವರನ್ನು ಕಳುಹಿಸಿ ಕೊಡಬೇಕು ಎಂದು ಹೇಳುತ್ತೇನೆ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

- Advertisement -

Related news

error: Content is protected !!