ವಿಠಲ ಪದವಿಪೂರ್ವ ಕಾಲೇಜು ಹುಡುಗಿಯರ ವಿಭಾಗ ದ್ವಿತೀಯ ಸ್ಥಾನ
ಹುಡುಗರ ವಿಭಾಗ ತೃತೀಯ ಸ್ಥಾನ






ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾಟವು ಸೈಂಟ್ ಎಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದಿದ್ದು ಸಿಂಚನ, ಸುಶ್ಮಿತಾ, ರೇಖಾ, ರೇಷ್ಮಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ರೇಷ್ಮಾ , ರೇಖಾ, ಸಿಂಚನ , ಹಿತಾ , ಸುಶ್ಮಿತಾ , ಅಶ್ವಿತ, ಅನನ್ಯ , ಕೆ ಸ್ಪೂರ್ತಿ ,ಪಲ್ಲವಿ ಜಿ. ಎಸ್ ,ವಿನ್ಯಾ ಸಿ ಶೆಟ್ಟಿ ,ವರ್ಷಿಣಿ ಭಾಗವಹಿಸಿರುತ್ತಾರೆ. ವಿಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರರಾಗಿರುವ ಶ್ರೀನಿವಾಸ ಗೌಡ ತರಬೇತಿ ನೀಡಿರುತ್ತಾರೆ. ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.


ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾಟವು ಸೈಂಟ್ ಎಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹುಡುಗರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದು ಮೋಕ್ಷಿತ್ ಮತ್ತು ಮಹಮ್ಮದ್ ಮುಸ್ತಾಕ್ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಾದ ಮನೀಷ್ , ಉತ್ತಮ್, ಧ್ಯಾನ್ , ಆಕಾಶ್, ಮೋಕ್ಷಿತ್, ಕೆ ಮಹಮ್ಮದ್ ಮುಸ್ತಾಕ್ ನಿಶಾಂತ್,ಜಸ್ವಂತ್,ಪ್ರಜ್ವಲ್,ಅಕ್ಷಯ್, ವಿಜಿತ್ ಬಾಬು ಯನ್,ಗಗನ್ ಕುಮಾರ್, ವಂದನ್, ಪ್ರಖ್ಯಾತ್ ಪಿ ಆರ್, ಧನ್ವಿತ್,ಮಹಮ್ಮದ್ ರಾಝಿ ಭಾಗವಹಿಸಿರುತ್ತಾರೆ. ಇವರಿಗೆ ವಿಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರರಾಗಿರುವ ಶ್ರೀನಿವಾಸ ಗೌಡ ತರಬೇತಿ ನೀಡಿರುತ್ತಾರೆ. ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.