Monday, April 29, 2024
spot_imgspot_img
spot_imgspot_img

ವಿಟ್ಲ:(ಆ.23) ದ.ಕ ಶಾಮಿಯಾನ ಮಾಲಕರ ಸಂಘ(ರಿ)ವಿಟ್ಲ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ: ದ.ಕ ಶಾಮಿಯಾನ ಮಾಲಕರ ಸಂಘ(ರಿ) ವಿಟ್ಲ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಆ.23ರಂದು ಬೆಳಿಗ್ಗೆ 11.30ಕ್ಕೆ ಭಾರತ್‌ ಸಭಾಭವನ ಕಲ್ಲಕಟ್ಟ ವಿಟ್ಲದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಅರಮನೆಯ ಬಂಗಾರು ಅರಸರು ನೆರವೇರಿಸಲಿದ್ದು, ಸಭಾಧ್ಯಕ್ಷತೆಯನ್ನು ದ.ಕ ಶಾಮಿಯಾನ ಮಾಲಕರ ಸಂಘ(ರಿ), ವಿಟ್ಲ ಘಟಕದ ಅಧ್ಯಕ್ಷರು ಚಂದ್ರಹಾಸ ಸುವರ್ಣ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್‌ ರೈ ಕೊಡಿಂಬಾಡಿ, ದೇಲಂತಬೆಟ್ಟು ಸಂತ ಪಾವುಲ್‌ ಇಗರ್ಜಿಯ ಧರ್ಮಗುರುಗಳಾದ ಸುನೀಲ್‌ ಪ್ರವೀಣ್ ಪಿಂಟೋ, ವಿಟ್ಲ ನೋಟರಿ ವಕೀಲ ಅಬೂಬಕ್ಕರ್‌, ಲಯನ್ಸ್‌ ಜಿಲ್ಲೆ 317ಡಿ, ಪೂರ್ವ ಜಿಲ್ಲಾ ಗವರ್ನರ್‌ ಡಾ| ಗೀತಪ್ರಕಾಶ್‌, ದ.ಕ ಶಾಮಿಯಾನ ಮಾಲಕರ ಸಂಘ(ರಿ) ಜಿಲ್ಲಾಧ್ಯಕ್ಷರು ಬಾಬು.ಕೆ ವಿಟ್ಲ, ದ.ಕ ಶಾಮಿಯಾನ ಮಾಲಕರ ಸಂಘ(ರಿ) ಕಾರ್ಯದರ್ಶಿ ನಿಶಿತ್‌ ಸುವರ್ಣ, ದ.ಕ ಶಾಮಿಯಾನ ಮಾಲಕರ ಸಂಘ(ರಿ) ಕೋಶಾಧಿಕಾರಿ ಬಾಲಕೃಷ್ಣ ಕದ್ರಿ ಭಾಗವಹಿಸಲಿದ್ದಾರೆ. M.S.Vಟೆಂಟ್‌ ವರ್ಕ್ಸ್ ಮಂಗಳೂರು ಲತೀಫ್‌, ಕರಾವಳಿ ಟೆಂಟ್‌ ವರ್ಕ್ಸ್ ಮಂಗಳೂರು, ರಶೀದ್‌, ಪೂನಿಯ ಟೆಂಟ್‌ ವರ್ಕ್ಸ್ ರಾಜೇಶ್‌ ಕುಮಾರ್‌ ಇವರುಗಳು ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ನೂತನ ಪದಾಧಿಕಾರಿಗಳು

ಗೌರವಾಧ್ಯಕ್ಷರು: ಸಂಜೀವ ಪೂಜಾರಿ, ವಿಟ್ಲ,
ಅಧ್ಯಕ್ಷರು: ಚಂದ್ರಹಾಸ ಸುವರ್ಣ ವಿಟ್ಲ
ಉಪಾಧ್ಯಕ್ಷರು: ಪದ್ಮನಾಭ ಶೆಟ್ಟಿ ಕುಡ್ತಮುಗೇರು, ಇಸ್ಮಾಯಿಲ್ ಬನಾರಿ
ಕಾರ್ಯದರ್ಶಿ: ಪ್ರಶಾಂತ್ ಶೆಟ್ಟಿ, ಕುಂಡಡ್ಕ
ಜೊತೆ ಕಾರ್ಯದರ್ಶಿ: ರಂಜಿತ್ ಕೆಲಿಂಜ, ಆನಂದ ಅಡ್ಯನಡ್ಕ
ಕೋಶಾಧಿಕಾರಿ: ಇಬ್ರಾಹಿಂ ಖಲೀಲ್, ಪಟ್ಲ
ಸಂಘಟನಾ ಕಾರ್ಯದರ್ಶಿ: ಇಕ್ಬಾಲ್ ಹಳೆಮನೆ ವಿಟ್ಲ, ದಿನೇಶ್ ನಾಯ್ಕ ಪುಣಚ
ಕ್ರೀಡಾ ಕಾರ್ಯದರ್ಶಿ: ಶೇಖ್‌ ಸುಭಾನ್ ಮಂಗಳಪದವು, ಕೆ.ಆರ್ ಕುಮಾರ್ ಕನ್ಯಾನ
ಸಾಂಸ್ಕೃತಿಕ ಕಾರ್ಯದರ್ಶಿ: ರಾಜಶೇಖರ ಶೆಟ್ಟಿ ಕುಡ್ತಮುಗೇರು, ಲಿಂಗಪ್ಪ ಡಿ.ಟಿ., ಪುಣಚ

- Advertisement -

Related news

error: Content is protected !!