Saturday, April 20, 2024
spot_imgspot_img
spot_imgspot_img

ಡಿ.ಕೆ ಶಿವಕುಮಾರ್ ಬೆಂಬಲ ಕೇಳಿದ ಆಶಾ ಕಾರ್ಯಕರ್ತೆಯರು.!!!

- Advertisement -G L Acharya panikkar
- Advertisement -

ಬೆಂಗಳೂರು:-ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಇಂದಿನಿಂದ ಪ್ರತಿಭಟನೆ ಆರಂಭಿಸಿದ್ದು, ಕನಕಪುರ ಹಾಗೂ ರಾಮನಗರ ಭಾಗದ ಆಶಾ ಕಾರ್ಯಕರ್ತೆಯರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದರು.

ಈ ವೇಳೆ, ಸರ್ಕಾರ ತಮಗೆ ನೀಡುತ್ತಿರುವ ವೇತನ ಯಾವುದಕ್ಕೂ ಸಾಲುತ್ತಿಲ್ಲ. ಅದು ನಮ್ಮ ಪ್ರಯಾಣಕ್ಕೆ ಸರಿ ಹೋಗುತ್ತದೆ. ಹೀಗಾಗಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ, ಸರ್ಕಾರದ ಮೇಲೆ ಒತ್ತಡ ತಂದು ನಮ್ಮ ಬೇಡಿಕೆ ಈಡೇರುವಂತೆ ಮಾಡಬೇಕು ಎಂದು ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸಿದ ಶಿವಕುಮಾರ್ ಅವರು, ಈ ಹೋರಾಟದಲ್ಲಿ ನಿಮ್ಮ ಬೆನ್ನಿಗೆ ನಿಲ್ಲುವುದಾಗಿ ಭರವಸೆ ಕೊಟ್ಟರು.

- Advertisement -

Related news

error: Content is protected !!