Sunday, June 29, 2025
spot_imgspot_img
spot_imgspot_img

ಸುಳ್ಯ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶರ ಮುಂದೆ ಡಿಕೆಶಿ ಹಾಜರ್

- Advertisement -
- Advertisement -

ಸುಳ್ಯ : ಸುಳ್ಯ ಕೋರ್ಟ್  ವಾರೆಂಟ್ ಜಾರಿ ಮಾಡಿದ ಹಿನ್ನಲೆ ಇಂದು ಸುಳ್ಯ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶರ ಎದುರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಾಗಿದ್ದಾರೆ. ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಸುಳ್ಯಕ್ಕೆ ಆಗಮಿಸಿ ಸಾಕ್ಷಿ ನುಡಿದಿದ್ದಾರೆ.

ನ್ಯಾಯಾಧೀಶರ ಎದುರು ಹಾಜರಾದ ಡಿಕೆಶಿ 2016ರ ಫೆಬ್ರವರಿ 27, 28ರಂದು ಐದಾರು ಬಾರಿ ಆರೋಪಿ ಗಿರಿಧರ್ ರೈ ನನಗೆ ಕರೆ ಮಾಡಿದ್ದಾನೆ. ತನ್ನ ಊರಿನಲ್ಲಿ ವಿದ್ಯುತ್ ಸಮಸ್ಯೆ ಇದೆ, ಪರಿಹರಿಸಿ ಅಂತ ಕೆಟ್ಟದಾಗಿ ಮಾತನಾಡಿದ್ದಾನೆ. ಕರೆ ಮಾಡಿದ ಎರಡೂ ದಿನವೂ ನನ್ನ ಜೊತೆ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಾನೆ. ಬೋ**ಮಗ ಸೂ**ಮಗ ಎಂದು ನನ್ನ ವಿರುದ್ದ ಪದ ಪ್ರಯೋಗಿಸಿದ್ದಾನೆ. ಐದಾರು ಬಾರಿ ಕರೆ ಮಾಡಿದ್ದು, ಅದರಲ್ಲಿ ನಾನು ಎರಡು ಬಾರಿ ಕರೆ ಸ್ವೀಕರಿಸಿ ಮಾತನಾಡಿದ್ದೇನೆ. ಸಮಸ್ಯೆ ಅಧಿಕಾರಿಗಳಿಗೆ ಹೇಳಿ ಪರಿಹರಿಸೋದಾಗಿ ತಾಳ್ಮೆಯಿಂದ ಹೇಳಿದೆ, ಆದರೂ ಆತ ಅತ್ಯಂತ ಕೆಟ್ಟ ಭಾಷೆಯಲ್ಲಿ ನನಗೆ ಬೈದು ಕೊಲೆ ಬೆದರಿಕೆ ಹಾಕಿದ್ದಾನೆ. ಆ ಬಳಿಕ ನಾನು ಸಚಿವನಾಗಿದ್ದ ಕಾರಣ ಅಧಿಕಾರಿಗಳ ಮೂಲಕ ದೂರು ಕೊಡಿಸಿದೆ ಎಂದು ನ್ಯಾಯಾಧೀಶರ ಎದುರು ಡಿ.ಕೆ.ಶಿವಕುಮಾರ್ ಸಾಕ್ಷ್ಯ ನುಡಿದಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ ಕಾನೂನಿಗೆ ತಲೆಬಾಗಿ ಕರ‍್ಟ್ ಗೆ ಹಾಜರಾಗಿದ್ದೇನೆ. ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ ನಾನು ಸಚಿವನಾಗಿದ್ದ ಸಂರ‍್ಭ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ. ಈಗಿನ ನೂತನ ಸಚಿವರು ಸಮಸ್ಯೆ ಬಗೆಹರಿಸಬಹುದು ಎಂಬ ಭರವಸೆ ಇದೆ ಎಂದರು. ಆ ವ್ಯಕ್ತಿ ನನಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಸರ‍್ವಜನಿಕ ಕೆಲಸ ಮಾಡೋವಾಗ ರ‍್ತವ್ಯಕ್ಕೆ ಅಡ್ಡಿ ಪ್ರಯತ್ನ ನಡೆಯುತ್ತದೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದರು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ನ್ಯಾಯಾಧೀಶರ ಮುಂದೆ ಹೇಳಿದ್ದೇನೆ.

ತುಳುವಿನಲ್ಲಿ ಫೇಸ್ ಬುಕ್ ಪೋಸ್ಟ್

ಇನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಡಿಕೆಶಿ ತುಳುವಿನಲ್ಲಿಯೇ ಬರೆದು ಪೋಸ್ಟ್ ಮಾಡಿದ್ದಾರೆ. “ಕರಾವಳಿ ಜಿಲ್ಲೆ ದಕ್ಷಿಣ ಕನ್ನಡರ್ಧ್ ಇನಿ ದಿನ ಶುರು ಆಂಡ್. ಕುಡ್ಲರ್ದ್ ಸುಳ್ಯ ಮುಟ್ಟುನ ಮಾರ್ಗದ ನಡುಟು ಪಕ್ಷದ ನಾಯಕೇರ್, ಕಾರ್ಯಕರ್ತ ನಕುಲು ಎನನ್ ಪ್ರೀತಿ ಡ್ ಎದುಕೊನಿಯರ್. ಈ ಪ್ರೀತಿ ವಿಶ್ವಾಸ ಬೊಕ್ಕ ಬೆಂಬಲ ಎನ್ನ ಮಲ್ಲ ಶಕ್ತಿ” ಎಂದು ಬರೆದುಕೊಂಡಿದ್ದಾರೆ.

https://www.facebook.com/DKShivakumar.official/posts/3142500695970128

driving
- Advertisement -

Related news

error: Content is protected !!