ಬಂಟ್ವಾಳ: ಹನಫೀ ಸುನ್ನೀಗಳಿಗೆ ಬೇರೆಯಾಗಿ ಯಾವುದೇ ಖಾಝಿಯನ್ನು ನೇಮಕ ಮಾಡಿಲ್ಲ ಹಾಗೊಂದು ಹೇಳಿಕೆ ಬೇರೆ ಯಾರಾದರೂ ಕೊಟ್ಟಿದ್ದರೆ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಯಾವುದೇ ಗುಮಾನಿಗಳಿಗೆ ಹನಫೀ ಸುನ್ನೀ ಸಮೂಹ ಬೆಲೆ ಕೊಡಬೇಡಿ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ನ ರಾಜ್ಯಾಧ್ಯಕ್ಷ ಕಾವಳಕಟ್ಟೆ ಹಝ್ರತ್ ಡಾ,ಮುಹಮ್ಮದ್ ಫಾಝಿಲ್ ರಝ್ವಿ ರವರು ಹೇಳಿದರು.ಅವರು ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ನ ವತಿಯಿಂದ ಕಾವಳಕಟ್ಟೆ ಅಲ್ ಖಾದಿಸಾ ವಿದ್ಯಾಸಂಸ್ಥೆ ಯಲ್ಲಿ ನಡೆದ ಬೃಹತ್ ಅಮ್ಜದಿ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಹನಫಿಗಳಿಗಾಗಿ ಓರ್ವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ ಮಂಗಳೂರಿನ ಮುಖಂಡರೊಬ್ಬರು ಹನಫಿಗಳ ಖಾಝಿ ಎಂಬುದಾಗಿ ಹೇಳಿಕೆ ನೀಡಿದ್ದರು,ಇದರ ವಿರುದ್ಧ ಕಾವಳಕಟ್ಟೆ ಹಝ್ರತ್ ರವರು ಪ್ರತಿಕ್ರಿಯೆ ನೀಡಿದ್ದಾರೆ ಅಂತಹ ವೈಯಕ್ತಿಕ ನಿಲುವಿಗೆ ಹನಫಿ ಸುನ್ನಿಗಳು ಬೆಲೆ ಕಲ್ಪಿಸುವುದಿಲ್ಲ ಎಂದು ಹಝ್ರತ್ ಹೇಳಿದರು
ಇದೇ ಸಂದರ್ಭದಲ್ಲಿ ಅವರು ಸದ್ರುಶ್ಶರೀಅಃ ಮುಹಮ್ಮದ್ ಅಮ್ಜದಿ ಅಲಿ ಅಹ್ಝಮಿ ರವರ ಜಗತ್ಪ್ರಸಿದ್ಧವಾದ ಬಹಾರೇ ಶರೀಅತ್ ಎಂಬ ಫಿಖ್ಹ್ ಗ್ರಂಥದ ತರಗತಿಯನ್ನು ನಡೆಸಿಕೊಟ್ಟರು ಸಮಾರಂಭದ ಅಧ್ಯಕ್ಷತೆಯನ್ನು ಎ. ಕೆ. ರಝಾ ಅಮ್ಜದಿ ಉಪ್ಪಿನಂಗಡಿ ವಹಿಸಿದ್ದರು. ಅಮ್ಜದೀಸ್ ನ ರಾಜ್ಯ ನಿರ್ದೇಶಕ ಯೂಸುಫ್ ರಝಾ ಅಮ್ಜದಿ ದಾವಣಗೆರೆ, ಡಾ. ಹನೀಫ್ ಅಮ್ಜದಿ ಬೆಳ್ಳಾರೆ ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಅಝೀಝ್ ಅಮ್ಜದಿ, ನಝೀರ್ ಅಮ್ಜದಿ ಮಾಣಿ, ಅನಸ್ ರಝಾ ಅಝ್ಹರಿ, ಜುನೈದ್ ರಝಾ ಅಝ್ಹರಿ , ಬಿಲಾಲ್ ಅಮ್ಜದಿ ಬೆಳಗಾವಿ, ರಫೀಕ್ ಅಮ್ಜದಿ ಮಾವಿನಕಟ್ಟೆ, ಇರ್ಷಾದ್ ಅಮ್ಜದಿ ಮಠ, ಅಬ್ದುಲ್ ಖಾದರ್ ಅಮ್ಜದಿ ಗೋವಿಂದೂರು, ಆಸಿಫ್ ಅಮ್ಜದಿ , ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ, ಅಶ್ರಫ್ ಅಮ್ಜದಿ ಮಲಾರ್ ಉಪಸ್ಥಿತರಿದ್ದರು. ರಾಜ್ಯಅಮ್ಜದೀಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಹಾಫಿಝ್ ಮುಈನುದ್ದೀನ್ ರಝಾ ಅಮ್ಜದಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.