Monday, May 20, 2024
spot_imgspot_img
spot_imgspot_img

ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಡಬಲ್‌ ಮರ್ಡರ್‌ ಬಿಗ್‌ ಟ್ವಿಸ್ಟ್‌! ಕೊಲೆ ಮಾಡಲು ಬಂದವರೇ ಬಲಿಯಾದರು

- Advertisement -G L Acharya panikkar
- Advertisement -
This image has an empty alt attribute; its file name is saptha-new-10-819x1024.jpg
This image has an empty alt attribute; its file name is VC_PUC_-1-819x1024.jpg

ಶಿವಮೊಗ್ಗ ಲಷ್ಕರ್ ಮೊಹಲ್ಲಾ ಮೀನು ಮಾರ್ಕೆಟ್‌ನಲ್ಲಿ ಹಾಡಹಗಲೇ ನಡೆದ ಇಬ್ಬರು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ

ಇಲ್ಲಿ ಕೊಲೆ ಮಾಡಲು ಬಂದ ರೌಡಿಶೀಟರ್‌ಗಲೇ ಕೊಲೆಯಾಗಿ ಬೀದಿ ಹೆಣವಾಗಿದ್ದಾರೆ. ಇದು ಯುವಕರ ಮೇಲಿನ ಹಲ್ಲೆಯಲ್ಲ, ರೌಡಿಗಳ ನಡುವೆ ಗ್ಯಾಂಗ್ ವಾರ್ ಆಗಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಲಷ್ಕರ್ ಮೊಹಲ್ಲಾದಲ್ಲಿ ಕೊಲೆಯಾದ ರೌಡಶೀಟರ್‌ಗಳನ್ನು ಕೆ.ಆರ್. ಪುರಂ ನಿವಾಸಿ ಸುಹೇಲ್ ಅಲಿಯಾಸ್ ಕಲಂದರ್ (30) ಅಣ್ಣಾನಗರದ ಗೌಸ್ ಅಲಿಯಾಸ್ ಕಾಲಾಗೌಸ್ (32) ಎಂದು ಪೊಲೀಸರು ಗುರುತಿಸಿದ್ದಾರೆ. ಇವರು ಶಿವಮೊಗ್ಗದ ರೌಡಿಶೀಟರ್ ಯಾಸಿನ್ ಕೊಲೆ ಮಾಡುವುದಕ್ಕೆಂದು ಬಂದಿದ್ದು, ಸುಖಾ ಸುಮ್ಮನೇ ಖುರೇಶಿ ಹಲ್ಲೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಗೌಸ್ ಮತ್ತು ಸುಹೇಲನ ಮೇಲೆ ಯಾಸಿನ್ ಖುರೇಶಿ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.

ರೌಡಿ ಶೀಟರ್ ಯಾಸಿನ್ ಖುರೇಶಿ ಕೊಲೆ ಮಾಡಲು 20ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಮತ್ತೊಂದು ಗುಂಪಿನವರು ಅಟ್ಯಾಕ್ ಮಾಡಿದ್ದರು. ಮೊದಲು ಸುಹೇಲ್ ಮತ್ತು ಗೌಸ್ ಬಂದು ಜಗಳ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ, ಈ ವೇಳೆಗೆ ಯಾಸೀನ್ ಸಹಚರರು ದಾಳಿಯ ಮುನ್ಸೂಚನೆ ಅರಿತು ಇಬ್ಬರ ಮೇಲೆ ಅಟ್ಯಾಕ್ ಮಾಡಿದ್ದಾರೆ. ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಗೌಸ್ ಮತ್ತು ಸುಹೇಲ್ ಕೊಲೆಯಾಗುತ್ತಿದ್ದಂತೆ ತಂಡದಲ್ಲಿದ್ದವರು ಪರಾರಿ ಆಗಿದ್ದಾರೆ.

ಪೊಲೀಸರು ಬಂದು ಸುಹೇಲ್ ಮತ್ತು ಗೌಸ್‌ನ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡುವ ಮುನ್ನ ಸ್ಥಳ ಪರಿಶೀಲನೆ ಮಾಡಿದಾಗ ಮೃತ ರೌಡಿಗಳ ಬಳಿ ಲಾಂಗು, ಮಚ್ಚು, ಚಾಕು, ಚೂರಿ ಹಾಗು ಕ್ರಿಕೆಟ್‌ನ ವಿಕೆಟ್‌ಗಳು ಇರುವುದು ಪತ್ತೆಯಾಗಿವೆ. ಆಗ, ಕೊಲೆ ಮಾಡಲು ಬಂದವರೇ ಬೀದಿ ಹೆಣವಾಗಿ ಬಿದ್ದಿದ್ದಾರೆ ಎಂಬುದು ತಿಳಿದುಬಂದಿದೆ. ಇದೀಗ ಶಿವಮೊಗ್ಗ ನಗರ ಕೋಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಲಷ್ಕರ್ ಮೊಹಲ್ಲಾದ ಮೀನು ಮಾರ್ಕೆಟ್ ಬಳಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!