Thursday, May 2, 2024
spot_imgspot_img
spot_imgspot_img

ವರದಕ್ಷಿಣೆ ಕಿರುಕುಳ; ಡೆತ್‌ನೋಟ್‌ ಬರೆದಿಟ್ಟು ಗೃಹಿಣಿ ನೇಣಿಗೆ ಶರಣು..!

- Advertisement -G L Acharya panikkar
- Advertisement -

ವರದಕ್ಷಿಣೆ ಕಿರುಕುಳದಿಂದಬೇಸತ್ತಿದ್ದ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಗೃಹಿಣಿ ಪ್ರೇಮಕುಮಾರಿ (26) ಮತ್ತು ಪತಿ ರಾಘವೇಂದ್ರ ಎಂದು ಗುರುತಿಸಲಾಗಿದೆ.

2022ರಲ್ಲಿ ಮೈಸೂರಿನ ಮೂಲದ ರಾಘವೇಂದ್ರ ಎನ್ನುವವರನ್ನು ಪ್ರೇಮಕುಮಾರಿ ಮದುವೆಯಾಗಿದ್ದರು.

ಮದುವೆ ಟೈಂನಲ್ಲೇ ಪ್ರೇಮಕುಮಾರಿ ಕುಟುಂಬಸ್ಥರು 150 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂ. ವರದಕ್ಷಿಣೆ ನೀಡಿದ್ದರು. ಮೂರು ತಿಂಗಳ ನಂತರ 64 ಲಕ್ಷ ರೂ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಗಂಡನ ಮನೆಯವರು ಒತ್ತಡ ಹಾಕಿದ್ದಾರೆ. ಇಲ್ಲದಿದ್ದರೆ ಈ ಮನೆಯಲ್ಲಿ ಜಾಗವಿಲ್ಲ ಎಂದು ಕಿರುಕುಳ ನೀಡುತ್ತಿದ್ದರಂತೆ ಎಂದು ಪ್ರೇಮಕುಮಾರಿ ಡೆತ್‌ನೋಟ್‌ ನಲ್ಲಿ ಬರೆದಿದ್ದಾರೆ.

ತವರು ಮನೆಗೆ ಬಂದಿದ್ದ ಪ್ರೇಮ ಅಲ್ಲೇ ಇದ್ದುಕೊಂಡೇ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ಮತ್ತೆ ಗಂಡನ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೇ ಕೊಲೆ ಮಾಡಿಸುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಲಾಯರ್‌ ಆಗುವ ನನ್ನ ಕನಸು ನನಸಾಗಲಿಲ್ಲ. ಇವರ ಕಾಟವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಒಳ್ಳೆಯವರಂತೆ ನಟಿಸಿ, ಮೋಸ ಮಾಡಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ನೀಡಿ ಎಂದು ಸುಮಾರು 5 ಪುಟಗಳ ಡೆತ್‌ನೋಟ್ ಬರೆದಿಟ್ಟು, ಬುಧವಾರ ಸಂಜೆ ನೇಣಿಗೆ ಶರಣಾಗಿದ್ದಾಳೆ. ಆಕೆಯ ಕುಟುಂಬಸ್ಥರು ಗಂಡನ ಮನೆಯವರ ವಿರುದ್ದ ಕಿಕ್ಕೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!