



ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕರ್ತರ ಸಭೆಯು ಇಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದಿದೆ.
ಸಭೆಯಲ್ಲಿ ಮಾತನಾಡಿದ ವಿಜಯೇಂದ್ರ,ನಮ್ಮ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಹೊಟ್ಟೆ ಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ..ಅವರು ಮಾಡಿರೋ ಸೇವೆಯ ಕಾರಣಕ್ಕೆ ಜನರು ಅವರನ್ನು ಗುರುತಿಸಿದ್ದಾರೆ..ರಾಜಕಾರಣದಲ್ಲಿ ಪ್ರಾಮಾಣಿಕ ವ್ಯಕ್ತಿಗಳು ಮುಂದಕ್ಕೆ ಬರಬೇಕಿದೆ..ಪ್ರಾಮಾಣಿಕತೆಗೆ ಮತ್ತೊಂದು ಹೆಸರು ದ.ಕ ಜಿಲ್ಲೆ .ದ.ಕ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳು..ಭೋಜೇಗೌಡರು ಒಬ್ಬ ನುರಿತ ರಾಜಕಾರಣಿ, ಅವರ ಮಾತುಗಳು ಚೆನ್ನಾಗಿದೆ..ಅವರ ಮಾತು ಕೇಳ್ತಾ ಇದ್ರೆ ಅವರು ಬಾಲ್ಯದಲ್ಲಿ ಸ್ವಯಂ ಸೇವಕ ಆಗಿರಬೇಕು ಅನಿಸುತ್ತೆ..ಈ ಕ್ಷೇತ್ರದಲ್ಲಿ ಅನೇಕ ಹಿರಿಯರು ಸ್ಥಾನದ ಅಪೇಕ್ಷೆ ಪಟ್ಟಿದ್ದರು..ವಿಕಾಸ್ ಪುತ್ತೂರು, ಗಣೇಶ್ ಕಾರ್ನಿಕ್ ಅಪೇಕ್ಷೆಯಲ್ಲಿ ಇದ್ದರು..ಆದರೆ ಇವತ್ತು ಪಕ್ಷದ ವರಿಷ್ಠರ ತೀರ್ಮಾನ ಒಪ್ಪಿ ಕೆಲಸ ಮಾಡ್ತಿದಾರೆ..ಕೆಲವರು ಗೆದ್ದರೆ ಮತ್ತೆ ಪಕ್ಷಕ್ಕೆ ವಾಪಸ್ ಬರ್ತೇವೆ ಅಂತ ಮಾತನಾಡ್ತಿದಾರೆ..ಹರೀಶ್ ಅಚಾರ್ಯ ಸೇರಿ ಕೆಲವರು ಮಾತನಾಡ್ತಾ ಇದಾರೆ..ಆದರೆ ಇಂಥ ಮಾತುಗಳಿಗೆ ಇಲ್ಲಿನ ಪ್ರಬುದ್ದ ಮತದಾರರು ಮರಳಾಗಲ್ಲ..ಧನಂಜಯ ಸರ್ಜಿ ಹೊಟ್ಟೆ ಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ..ಅವರು ಮಾಡಿರೋ ಸೇವೆಯ ಕಾರಣಕ್ಕೆ ಜನರು ಅವರನ್ನು ಗುರುತಿಸಿದ್ದಾರೆ..ರಾಜಕಾರಣದಲ್ಲಿ ಪ್ರಾಮಾಣಿಕ ವ್ಯಕ್ತಿಗಳು ಮುಂದಕ್ಕೆ ಬರಬೇಕಿದೆ ಎಂದು ಹೇಳಿದರು..
ರಾಜ್ಯದಲ್ಲಿ ಸರ್ಕಾರ ಬಂದು ಒಂದು ವರ್ಷ ಆಗಿದೆ..ಒಂದೇ ವರ್ಷದ ಆಡಳಿತ ವೈಖರಿ ನೋಡಿದ್ರೆ ಸರ್ಕಾರ ಇದೆ ಅನಿಸ್ತಿಲ್ಲ..ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗ್ತಿಲ್ಲ..ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಮೊಸರಲ್ಲಿ ಕಲ್ಲು ಹುಡುಕಿದ್ರು..ರಾಜ್ಯದಲ್ಲಿ ಪ್ರತ್ಯೇಕ ಎಸ್ ಇಪಿ ತರೋ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸ್ತಿದಾರೆ..ಶಿಕ್ಷಕರು, ಪೋಷಕರು ಕೂಡ ಯೋಚನೆ ಮಾಡ್ತಿದಾರೆ..ಅಭಿವೃದ್ಧಿ ಮರೀಚಿಕೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ..ಇವರ ಅಲ್ಪ ಸಂಖ್ಯಾತ ತುಷ್ಟೀಕರಣ ನೀತಿಯಿಂದ ದಾವಣಗೆರೆಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ಮಾಡಿದ್ದಾರೆ..ಇವರ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಇರೋದೇ ಕಾರಣ..ಏನೇ ಮಾಡಿದ್ರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತೆ ಅನ್ನೋ ನಂಬಿಕೆ ಇದೆ..ಇದರ ಪರಿಣಾಮ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ..ನಾನು ಕೂಡ ಪಕ್ಷದ ಹಿರಿಯರ ಹಾಗೂ ಕಾರ್ಯಕರ್ತರ ಅಪೇಕ್ಷೆ ಅರ್ಥ ಮಾಡಿಕೊಂಡಿದ್ದೇನೆ..ನಾನು ಯಾವತ್ತೂ ರಾಜ್ಯದ ಅಧ್ಯಕ್ಷ ಅಂತ ಅಂದುಕೊಂಡಿಲ್ಲ..ಮುಂದಿನ ದಿನಗಳಲ್ಲಿ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬೋ ಕೆಲಸ ಮಾಡ್ತೇನೆ..ಮತ್ತೆ ಬಿಜೆಪಿಯನ್ನ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರ್ತೇನೆ..ಪಕ್ಷದ ವಿರುದ್ದ ಸ್ಪರ್ಧೆ ಮಾಡಿರೋದ್ರ ಪರಿಣಾಮ ಏನೂ ಆಗಲ್ಲ..ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಮತದಾರರನ್ನ ತಲುಪ್ತಿದಾರೆ..ಬಿಜೆಪಿ, ನಮ್ಮ ಅಭ್ಯರ್ಥಿಗಳ ಮೇಲೆ ಜನ ವಿಶ್ವಾಸ ಇಟ್ಟುಕೊಂಡಿದ್ದಾರೆ..ನಮ್ಮ ಗೆಲುವಿನ ಅಂತರ ಹೆಚ್ಚಾಗಲಿದೆ, ಕಡಿಮೆಯಾಗಲ್ಲ..ಯಾರು ಏನೇ ಹೇಳಿದ್ರೂ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ವಿಜಯೇಂದ್ರ ಹೇಳಿದರು..


