Friday, May 3, 2024
spot_imgspot_img
spot_imgspot_img

ವಿಜಯಶಾಲಿ ಪ್ರತಿಸ್ಪರ್ಧಿಗೆ ಅಭಿನಂದನೆ ಸಲ್ಲಿಸಿದ ಡಾ. ಕೆ ಸುಧಾಕರ್..! ಮಾಜಿ ಸಚಿವನ ಭಾವುಕ ಪೋಸ್ಟ್

- Advertisement -G L Acharya panikkar
- Advertisement -

ಮಾಜಿ ಸಚಿವ ಡಾ. ಕೆ ಸುಧಾಕರ್ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಪ್ರದೀಪ್​ ಈಶ್ವರ್​​ ವಿರುದ್ಧ ಹೀನಾಯ ಸೋಲು ಕಂಡ ಸುಧಾಕರ್​​​ ತನ್ನ ಅಧಿಕೃತ ಟ್ವಿಟರ್​​ ಖಾತೆಯಲ್ಲಿ ಭಾವುಕ ಪೋಸ್ಟ್​ವೊಂದು ಹಾಕಿದ್ದಾರೆ. ಈ ಪೋಸ್ಟ್​​ನಲ್ಲಿ ಹತ್ತು ವರ್ಷಗಳ ಕಾಲ ತನಗೆ ಬೆಂಬಲ ನೀಡಿದ್ದ ಚಿಕ್ಕಬಳ್ಳಾಪುರ ಜನರಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಚಿಕ್ಕಬಳ್ಳಾಪುರದ ಪ್ರತಿನಿಧಿಯಾಗಿ, ನಿಮ್ಮೆಲ್ಲರ ಮನೆ ಮಗನಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕ್ಕಬಳ್ಳಾಪುರದ ಅಭಿವೃದ್ಧಿಗಾಗಿ ನಾನು ಪಟ್ಟ ಶ್ರಮದ ಬಗ್ಗೆ ನನಗೆ ಆತ್ಮ ತೃಪ್ತಿ ಇದೆ. ಆದರೂ, ಎಲ್ಲೋ ಒಂದು ಕಡೆ ನಿಮ್ಮ ನಿರೀಕ್ಷೆಯನ್ನು ನನ್ನಿಂದ ತಲುಪಲು ಆಗಿಲ್ಲ ಎಂದು ಅನಿಸುತ್ತಿದೆ ಎಂದು ಭಾವುಕರಾಗಿದ್ದಾರೆ ಸುಧಾಕರ್.

ಕೋವಿಡ್​ ಕಾಲದಲ್ಲಿ ಆರೋಗ್ಯ ಸಚಿವನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿದ್ದ ಕಾರಣ ನನ್ನ ಕುಟುಂಬಕ್ಕೆ ನಾನು ಸಮಯ ನೀಡಲು ಆಗಿರಲಿಲ್ಲ. ನಿಮ್ಮ ತೀರ್ಪು ಸ್ವಾಗತಿಸುತ್ತೇನೆ. ನೀವು ಆಯ್ಕೆ ಮಾಡಿದ ನೂತನ ಶಾಸಕರಾದ ಪ್ರದೀಪ್​ ಈಶ್ವರ್​ಗೆ ಅಭಿನಂದನೆಗಳು. ಈಗ ಒಂದಷ್ಟು ದಿನ ನನ್ನ ಕುಟುಂಬದೊಂದಿಗೆ ಕಾಲ ಕಳೆದು ಬಳಿಕ ನನ್ನಿಂದಾಗುವ ಅಳಿಲು ಸೇವೆ ಮಾಡುತ್ತೇನೆ ಎಂದಿದ್ದಾರೆ.

- Advertisement -

Related news

error: Content is protected !!