- Advertisement -
- Advertisement -
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಇಕ್ಕೇರಿ ಬಳಿಯ ಕಸಕಸೆಕೋಡ್ಲುವಿನಲ್ಲಿ ಇಂದು (ಅ.11) ಬೆಳಗಿನ ಜಾವ ತಾಯಿ ಮತ್ತು ಮಗನನ್ನು ಚಾಕುವಿನಿಂದ ಇರಿದು ಅಮಾನುಷವಾಗಿ ಹತ್ಯೆಗೈಯಲಾಗಿದೆ.

ವೃದ್ಧ ಜೋಡಿ ಕೊಲೆ ಪ್ರಕರಣ ಮರೆಯುವ ಮುನ್ನವೇ ತಾಯಿ ಮಗನ ಕೊಲೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.ತಾಯಿ ಬಂಗಾರಮ್ಮ (62) ಹಾಗೂ ಮಗ ಪ್ರವೀಣ (32) ಕೊಲೆಯಾದವರು. ಕೊಲೆ ಬಳಿಕ ಹಣ ಹಾಗೂ ಮೊಬೈಲ್ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಪ್ರವೀಣ ಅವರ ಪತ್ನಿ ರೋಹಿಣಿ ಹಾಗೂ 10 ತಿಂಗಳ ಮಗುವಿನ ಎದುರೇ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸಾಗರದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


- Advertisement -