Monday, June 30, 2025
spot_imgspot_img
spot_imgspot_img

ಸಿಸಿಬಿ ಮುಂದೆ ರಿಕ್ಕಿ ರೈ ವಿಚಾರಣೆಗೆ ಹಾಜರು

- Advertisement -
- Advertisement -

ಬೆಂಗಳೂರು: ಬೆಂಗಳೂರು ಮಾದಕ ದ್ರವ್ಯ ಜಾಲದ ನಂಟಿನ ತನಿಖೆ ಬಿರುಸುಪಡೆದುಕೊಂಡಿದೆ. ಇಂದು ಈ ಸಂಬಂಧ ಸಿಸಿಬಿ ಮುಂದೆ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳವಾರ ಸಿಸಿಬಿ ಅಧಿಕಾರಿಗಳು ಮುತ್ತಪ್ಪ ರೈ ಅವರ ಬಿಡದಿ ಮತ್ತು ಸದಾಶಿವ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದರು. ಪ್ರಾಥಮಿಕ ಹಂತದ ವಿಚಾರಣೆ ನಡೆಸಿದ್ದರು.

ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈ ಅವರಿಗೆ ಸೂಚಿಸಲಾಗಿತ್ತು. ಡ್ರಗ್ಸ್ ಜಾಲದ ಮುಖ್ಯ ಆರೋಪಿ ಆದಿತ್ಯಾ ಆಳ್ವಾ ಅವರಿಗೆ ರಿಕ್ಕಿ ರೈ ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಡ್ರಗ್ ಪೆಡ್ಲರ್ ಗಳಿಗೆ ಸಹಾಯ ಮಾಡಿದ ಆರೋಪ ಅವರನ್ನು ರಿಕ್ಕಿ ರೈ ಎದುರಿಸುತ್ತಿದ್ದಾರೆ.

- Advertisement -

Related news

error: Content is protected !!