Friday, May 17, 2024
spot_imgspot_img
spot_imgspot_img

ತೈಲ ನಗರಕ್ಕೆ ಕೋಟಿಗೊಬ್ಬನ ಎಂಟ್ರಿ; ಕಮಲ ನಾಯಕ ಆರ್ ಅನಿಲ್ ಕುಮಾರ್ ಪರ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ‌ ಕಿಚ್ಚ

- Advertisement -G L Acharya panikkar
- Advertisement -

ಚಳ್ಳಕೆರೆ: ಆಯಿಲ್ ಸಿಟಿಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಲು ನಟ ಸುದೀಪ್ ಇಂದು ಮಧ್ಯಾಹ್ನ ಮೂರು ಗಂಟೆಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು 2023ರ ವಿಧಾನ ಸಭಾ ಚುನಾವಣೆ ಚಳ್ಳಕೆರೆ ಕ್ಷೇತ್ರದಲ್ಲಿ ಗೆಲ್ಲುವ ಭರವಸೆಯಲ್ಲಿ ಇಡೀ ರಾಜ್ಯದಲ್ಲಿ ಸಂಚಾರ ಮಾಡುವ ಬಿಜೆಪಿ ವರಿಷ್ಠರು ಹಾಗೂ ಸ್ಟಾರ್ ಕ್ಯಾಂಪೇನ್ ಚಳ್ಳಕೆರೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಆದ್ದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಯುವಮೋರ್ಚ ಅಧ್ಯಕ್ಷ ಕಾಲುವೆಹಳ್ಳಿ ಪಾಲಯ್ಯ, ಬಿಜೆಪಿ ಯುವ ಮೋರ್ಚ ಜಿಲ್ಲಾ ಕಾರ್ಯದರ್ಶಿ ಜ್ಯೋತಿಪ್ರಕಾಶ್, ಭಾನುಪ್ರಕಾಶ್, ಯೋಗೇಶ್ ಶಿವರಾಜ್, ಹರೀಶ್, ಜಗದೀಶ್, ಮಧು, ಧನುಷ್ ಪ್ರಕಟಣೆಯಲ್ಲಿ ಕೋರಿದ್ದಾರೆ.

- Advertisement -

Related news

error: Content is protected !!