Sunday, June 29, 2025
spot_imgspot_img
spot_imgspot_img

ಬಿ ಸಿ ರೋಡ್‌: ಕ್ರೀಡಾ ಹಾಗೂ ಮನೋರಂಜನೆ ಸಂಘ ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ

- Advertisement -
- Advertisement -

ಬಿ ಸಿ ರೋಡ್‌: ಕ್ರೀಡಾ ಹಾಗೂ ಮನೋರಂಜನೆ ಸಂಘ ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆ ಇದರ ವತಿಯಿಂದ ಶ್ರೀಮತಿ ಮಾಲತಿ ಕೆ ಎಸ್‌ ಹಾಗೂ ಎಸ್‌ಎಲ್ ಶ್ರೀಪಾದರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಎಲ್‌‌ಐಸಿ ಶಾಖೆಯ ಕೆಳಗಿನ ಮಹಡಿಯಲ್ಲಿ ನಡೆಯಿತು.

ಕೆ ಸತೀಶ್‌ ಕುಮಾರ್‌ ಮುಖ್ಯ ಪ್ರಬಂಧಕರು ಎಲ್‌‌ಐಸಿ ಬಂಟ್ವಾಳ ಶಾಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿಕ್ಕಪುತ್ತೂರು ಚಂದ್ರು ನಿವೃತ್ತ ವಿಭಾಗಾಧಿಕಾರಿ ಎಲ್‌‌ಐಸಿ ಆಫ್‌ ಇಂಡಿಯಾ, ದಿನೇಶ್‌ ಮಾಮೇಶ್ವರ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಕ್ರೀಡಾಕೂಟ ಮನೋರಂಜನಾ ಸಂಘ ಎಲ್‌‌ಐಸಿ ಬಂಟ್ವಾಳ ಶಾಖೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಸಿಬ್ಬಂಧಿಗಳು, ಪ್ರತಿನಿಧಿಗಳು, ನಿವೃತ್ತ ಸಿಬ್ಬಂದಿಗಳು, ಹಿತೈಷಿಗಳು, ಆಹ್ವಾನಿತರು, ನಿವೃತ್ತ ಸಿಬ್ಬಂದಿಗಳು ಕಾರ್ಯಕ್ರಮದ ಕೇಂದ್ರ ಬಿಂದು ಶ್ರೀಮತಿ ಮಾಲತಿ ಕೆ ಎಸ್‌ ಹಾಗೂ ಎಸ್‌ಎಲ್ ಶ್ರೀಪಾದರವರ ಬಗ್ಗೆ ಶುಭಹಾರೈಸಿದರು.

ಬಳಿಕ ಶ್ರೀಮತಿ ಮಾಲತಿ ಕೆ ಎಸ್‌ ಹಾಗೂ ಎಸ್‌ಎಲ್ ಶ್ರೀಪಾದರನ್ನು ಕ್ರೀಡಾ ಹಾಗೂ ಮನೋರಂಜನೆ ಸಂಘ ಭಾರತೀಯ ಜೀವ ವಿಮಾ ನಿಗಮ ಬಂಟ್ವಾಳ ಶಾಖೆ ಇದರ ವತಿಯಿಂದ ಸನ್ಮಾನಿಸಲಾಯಿತು.

ಶ್ರೀಮತಿ ಮಾಲತಿ ಕೆ ಎಸ್‌ ಹಾಗೂ ಎಸ್‌ಎಲ್ ಶ್ರೀಪಾದ ಇವರು ಕಾರ್ಯಕ್ರಮದ ಬಗ್ಗೆ ಹಾಗೂ ತಮ್ಮ ಸೇವೆಯ ಬಗ್ಗೆ ಮಾತುಗಳನ್ನಾಡಿದರು.

ರಾಕೇಶ್‌ ಪ್ರಾರ್ಥಿಸಿ, ಹಿರಿಯ ಅಭುವೃದ್ಧಿ ಅಧಿಕಾರಿ ಮಧ್ವರಾಜ್‌ ಕಲ್ಮಾಡಿ ಸ್ವಾಗತಿಸಿದರು, ರಘುಚಂದ್ರ ಉನ್ನತ ಶ್ರೇಣಿ ಸಹಾಯಕರು ಧನ್ಯವಾದವಿತ್ತರು. ನಾರಾಯಣ ಎನ್‌ ಬಲ್ಯ, ಅಭಿವೃದ್ಧಿ ಅಧಿಕಾರಿ ಹಾಗೂ ಧರಣೇಂದ್ರ ಜೈನ್‌ರವರು ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅನನ್ಯ ರೈ ಮತ್ತು ಪ್ರತಿನಿಧಿಗಳಿಂದ ’ಗೀತಾ ನೃತ್ಯ ಸಂಭ್ರಮ’ ಕಾರ್ಯಕ್ರಮ ಹಾಗೂ ಹವ್ಯಾಸಿ ಕಲಾವಿದರು ಮತ್ತು ಎಲ್‌‌ಐಸಿ ಬಂಧುಗಳಿಂದ ಸತ್ಯೊದ ಸ್ವಾಮಿ ಕೊರಗಜ್ಜೆ ಯಕ್ಷಗಾನ ಬಯಲಾಟ ನಡೆಯಿತು.

- Advertisement -

Related news

error: Content is protected !!