


ವಿಟ್ಲ: 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ನ ಪ್ರಧಾನ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಯೋಧರಾದ ಕ್ಯಾಪ್ಟನ್ ಶ್ರೀ ಧನಂಜಯ ನಾಯ್ತೊಟ್ಟು ಇವರು ನೆರವೇರಿಸಿ, ದೇಶಾಭಿಮಾನದ ಬಗ್ಗೆ ಮಾತನಾಡಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ನ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಹೆಚ್, ಉಪಾಧ್ಯಕ್ಷ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಹರೀಶ್ ನಾಯಕ್.ಎಂ, ವಿಶ್ವನಾಥ್ ಎಂ, ಉದಯಕುಮಾರ್ ಎ, ಬಾಲಕೃಷ್ಣ ಪಿ.ಎಸ್, ದಯಾನಂದ ಆಳ್ವ, ಗೋವರ್ಧನ್ ಕುಮಾರ್ ಐ, ಸುಂದರ. ಡಿ, ದಿವಾಕರ ವಿ, ಜಯಂತಿ ಹೆಚ್.ರಾವ್ ಶುಭಲಕ್ಷ್ಮಿ ಹಾಗೂ ತುಳಸಿದಾಸ್ ಶೆಣೈ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೃಷ್ಣ ಮುರಳಿ ಶ್ಯಾಮ್. ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಕ್ಯಾಪ್ಟನ್ ಶ್ರೀ ಧನಂಜಯ ನಾಯ್ತೊಟ್ಟು ಹಾಗೂ ಶ್ರೀ ತುಳಸಿದಾಸ್ ಶೆಣೈ ಇವರನ್ನು ಬ್ಯಾಂಕ್ನ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬ್ಯಾಂಕ್ನ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶ್ರೀ ಚಂದ್ರಹಾಸ ರಾಣ್ಯ ಡಿ ಕಾರ್ಯಕ್ರಮ ನಿರೂಪಿಸಿದರು.