


ಅಳಕೆಮಜಲು : ದ.ಕ.ಜಿ.ಪಂ.ಕಿ.ಪ್ರಾ.ಶಾಲೆ, ಅಳಕೆಮಜಲು ಇದರ ಹೊಸ ಎಸ್.ಡಿ.ಎಂ.ಸಿ ಯು ರಚನೆ ದಿನಾಂಕ 04-07-2024 ಗುರುವಾರ ಜರುಗಿತು.
ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ರಾದ ಪದ್ಮನಾಭ ಸಫಲ್ಯ, ಸದಸ್ಯರಾದ ಚಿದಾನಂದ ಪೆಲತ್ತಿಂಜ ಅವರ ಉಪಸ್ಥಿತಿಯಲ್ಲಿ ಎಸ್.ಡಿ.ಎಂ.ಸಿ ಸಮಿತಿ ಯನ್ನು (2024-25 ) ರಚಿಸಲಾಯಿತು. ಹೊಸ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ತಿರುಮಲೇಶ್ವರ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ರೂಪ ಕೆ.ವಿ ಆಯ್ಕೆಯಾದರು
.ಅದೇ ರೀತಿ ಇತರೆ ಸದಸ್ಯರಾಗಿ ರಮೇಶ್, ರೇವತಿ, ವಾರಿಜಾ, ಸುಕುಮಾರ, ಜಯಶ್ರೀ, ಗಿರೀಶ, ಭವ್ಯ ಪೆಲತ್ತಿಂಜ, ಮಾಲತಿ , ಖಲಂದರ್ ಶಾಫಿ, ಶಮೀಮ, ರುಕ್ಯ, ಶಮೀಮ ಬಾನು, ಫಾತಿಮಾ, ಜಮೀಲ, ಅಶ್ವಿನಿ, ಮಿಶ್ರಿಯ ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯರಾದ ಇಸ್ಮಾಯಿಲ್ ಪ್ರಾಸ್ತಾವಿಕ ಮಾತನಾಡಿದರು.ಮಕ್ಕಳನ್ನು ತಿದ್ದುವುದರಲ್ಲಿ ಹೆತ್ತವರ ಪಾತ್ರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ರಮೇಶ್ ಎಂ ಬಾಯಾರ್ ಅರ್ಥ ವತ್ತಾಗಿ ಮಾತನಾಡಿದರು.ಅದೇ ರೀತಿ ಹೆತ್ತ ವರ ಜವಾಬ್ದಾರಿಗಳ ಬಗ್ಗೆ ಶಿಕ್ಷಕಿ ರಾಜೀವಿ ಟೀಚರ್ ಮಾತನಾಡಿ ದರು. ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯೋಪಾಧ್ಯಾಯರು, ಆರೋಗ್ಯ ಕಾರ್ಯಕರ್ತೆ( ಸೆಲ್ವಿ) ಅಂಗನವಾಡಿ ಕಾರ್ಯಕರ್ತೆ ( ಉಷಾ) ಆಯ್ಕೆಯಾದರು.
ಅದೇ ರೀತಿ ನಾಮ ನಿರ್ದೇಶಿತ ಸದಸ್ಯರಾಗಿ ಪದ್ಮನಾಭ ಸಫಲ್ಯ (ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರು), ರಮೇಶ್ ಎಂ ಬಾಯಾರ್(ಶಿಕ್ಷಣ ತಜ್ಞರು), ಹಿರಿಯ ಶಿಕ್ಷಕರು, ವಿದ್ಯಾರ್ಥಿ ಪ್ರತಿನಿಧಿ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಜ್ಯೋತಿ ಸ್ವಾಗತಿಸಿ, ಜಯಂತಿ ನಾಯ್ಕ ವಂದಿಸಿದರು.ಕಾರ್ಯಕ್ರಮದಲ್ಲಿ ಬಲ್ಕೀಸ್ ಮೇಡಂ ಹಾಗೂ ತಿ ದಿವ್ಯ ಮೇಡಂ ಸಹಕರಿಸಿದರು.