

ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳಂಜೆ ಎಂಬಲ್ಲಿ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ಬಸ್ಸಿನ ಮುಂದುಗಡೆಯ ಗಾಜು ಸಂಪೂರ್ಣ ಹೊಡೆದು ಹೋಗಿ ಚಾಲಕನಿಗೆ ಸಣ್ನಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಬಸ್ ನಿಧಾನವಾಗಿ ಹೆಬ್ರಿ ಕಡೆಗೆ ಸಾಗುತ್ತಿರುವಾಗ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಮರ ಬಸ್ ಮೇಲೆ ಬಿದ್ದಿದೆ. ಬಸ್ಸಿನ ಮುಂದುಗಡೆಯ ಗಾಜು, ಸೈಡ್ ಮಿರರ್ ಸೇರಿದಂತೆ ಕೆಲವೆಡೆ ಹಾನಿಯಾಗಿದೆ.
ಒಂದು ವೇಳೆ ಮರ ನೇರವಾಗಿ ಬಸ್ಸಿನ ಮೇಲೆ ಬಿದ್ದಿದ್ದರೆ ಪ್ರಾಣ ಹಾನಿಯಾಗುವ ಸಂಭವಿತ್ತು. ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಬಸ್ಸಿಗೆ ಹೊಡೆದು ನೇತಾಡುತ್ತಿತ್ತು. ಬಸ್ಸಿನಲ್ಲಿ ಕೆಲವು ಜನ ಪ್ರಯಾಣಿಕರು ಮಾತ್ರ ಇದ್ದಿದ್ದರಿಂದ ನಡೆಯಬಹುದಾದ ದೊಡ್ಡ ಅನಾಹುತ ಒಂದು ತಪ್ಪಿದೆ.
ಚಾಲಕನ ಪಕ್ಕದ ಎಡಗಡೆಯ ಸೀಟಿನಲ್ಲಿ ಕುಳಿತಿದ್ದರು ದೊಡ್ಡಮಟ್ಟದ ಅಪಾಯ ಇದ್ದಿತ್ತು. ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಇನ್ನೊಂದು ಬದಿ ಮರ ಬಿದ್ದಿದ್ದರೆ ಮನೆಯೊಂದು ಸಂಪೂರ್ಣ ಹಾನಿಯಾಗುತ್ತಿತ್ತು ಎಂದು ತಿಳಿದುಬಂದಿದೆ.