Saturday, April 27, 2024
spot_imgspot_img
spot_imgspot_img

ಒಕ್ಕೆತ್ತೂರು : (ಮಾ-27-29) ಒಕ್ಕೆತ್ತೂರು ಕುಟುಂಬದ ನೂತನ ದೈವ ದೇವರ ಬಂಜನ್ ತರವಾಡು ಮನೆಯ ಗೃಹಪ್ರವೇಶ ಮತ್ತು ಕಲ್ಲುರ್ಟಿ, ಪಂಜುರ್ಲಿ, ರಾಹುಗುಳಿಗ ದೈವಗಳ ಪುನರ್‌ಪ್ರತಿಷ್ಠಾ ಮತ್ತು ಕಲಶಾಭಿಷೇಕ ಕೋಲೋತ್ಸವ

- Advertisement -G L Acharya panikkar
- Advertisement -

ಒಕ್ಕೆತ್ತೂರು : ಒಕ್ಕೆತ್ತೂರು ಕುಟುಂಬದ ನೂತನ ದೈವ ದೇವರ ಬಂಜನ್ ತರವಾಡು ಮನೆಯ ಗೃಹಪ್ರವೇಶ ಮತ್ತು ಕಲ್ಲುರ್ಟಿ, ಪಂಜುರ್ಲಿ, ರಾಹುಗುಳಿಗ ದೈವಗಳ ಪುನರ್‌ಪ್ರತಿಷ್ಠಾ ಮತ್ತು ಕಲಶಾಭಿಷೇಕ ಕೋಲೋತ್ಸವವು ಮಾ. 27 ರಿಂದ 29 ವರೆಗೆ ಒಕ್ಕೆತ್ತೂರು ಕುಟುಂಬದ ದೈವದೇವರ ಸಾನಿಧ್ಯ ಇಂದ್ರಪಡ್ಪು, ಮಾಮೇಶ್ವರ ಕಟ್ಟೆ ಇಲ್ಲಿ ನಡೆಯಲಿದೆ.

ದಿನಾಂಕ: 27-3-2024 ನೇ ಬುಧವಾರ ಸಂಜೆ 5:00 ಕ್ಕೆ ತಂತ್ರಿವರ್ಯರ ಆಗಮನ ಬಳಿಕ ಸಂಜೆ 5:30ಕ್ಕೆ ಪರಿಗೃಹ ನಡೆದು 5:40ಕ್ಕೆ ಪ್ರಾರ್ಥನೆ ,ಸ್ಥಳ ಶುದ್ಧಿ ನೂತನ ತರವಾಡು ಗೃಹಶುದ್ಧಿ, ಶ್ರೀ ದೈವಗಳ ಮನೆ ಮಂಚಗಳು, ಆಯುಧಗಳ ಶುದ್ಧಿ ಕ್ರಿಯೆಗಳು, ವಾಸ್ತು ಪೂಜೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ ನಡೆಯಲಿದೆ.

ದಿನಾಂಕ 28-3-2024 ನೇ ಗುರುವಾರ ಬೆಳಿಗ್ಗೆ ಗಂಟೆ 6-00ಕ್ಕೆ ಗಣಪತಿ ಹೋಮ, ಬೆಳಿಗ್ಗೆ 11-30 ಗೆ ತರವಾಡು ಗೃಹಪ್ರವೇಶ, ಕುಪ್ಪೆ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ಮನೆ ಮಂಚ ಆಯುಧಗಳ ಪ್ರತಿಷ್ಠೆ, ಕಲಶಾಭಿಷೇಕ ನಂತರ ಕಟ್ಟೆಯಲ್ಲಿ ರಾಹುಗುಳಿಗ ಪ್ರತಿಷ್ಠೆ, ಮುಡಿಪು ಪೂಜೆ ಕಾಣಿಕೆ. ಗಂಟೆ 11-45ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ಪ್ರಸಾದ ವಿತರಣೆ ನಂತರ ಭಜನಾ ಕಾರ್ಯಕ್ರಮ (ಕುಟುಂಬಸ್ಥರು ಮತ್ತು ಸ್ಥಳೀಯರಿಂದ) , ಮಧ್ಯಾಹ್ನ 1-00 ಗಂಟೆಗೆ ಅನ್ನಸಂತರ್ಪಣೆ ಜರಗಳಿದೆ.
ಸಂಜೆ ಗಂಟೆ 7-30ರಿಂದ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ರಾಹುಗುಳಿಗ ದೈವಗಳ ಕೋಲ ಜರಗಳಿದೆ ನಂತರ ರಾತ್ರಿ ಗಂಟೆ 8-00ರಿಂದ ಅನ್ನಸಂತರ್ಪಣೆ ನಡೆಯಲಿದೆ.
29-03-2024ನೇ ಶುಕ್ರವಾರ ಸಂಜೆ ಗಂಟೆ 6-30ಕ್ಕೆ ದೈವಗಳಿಗೆ ತಂಬಿಲ ಸೇವೆ ಹಾಗೂ ಗುರು ಹಿರಿಯರಿಗೆ ಬಡಿಸುವ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!