Saturday, June 28, 2025
spot_imgspot_img
spot_imgspot_img

ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲವೆಂದು ಹೆಂಡತಿಯನ್ನೇ ಕೊಲೆಗೈದ ಪತಿರಾಯ

- Advertisement -
- Advertisement -

ಬೆಂಗಳೂರು: ರುಚಿಯಾಗಿ ಚಿಕನ್ ಫ್ರೈ ಮಾಡಿಕೊಟ್ಟಿಲ್ಲ ಎಂದು ಪತ್ನಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದ ಘಟನೆ ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುಬಾರಕ್ ಹಾಗೂ ಶಿರೀನ್ ಬಾನು ಎಂಬುವವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು.

ಆಗಸ್ಟ್ 18 ರಂದು ಪತ್ನಿಯನ್ನು ಪತಿಯೇ ಕೊಲೆ ಮಾಡಿ ಬಳಿಕ ಚಿಕ್ಕಬಾಣಾವರ ಕೆರೆಗೆ ಎಸೆದಿದ್ದ. ತನ್ನ ಹೆಂಡತಿಯನ್ನು ತಾನು ಕೊಲೆ ಮಾಡಿದ್ದಾಗಿ ಮುಬಾರಕ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಶಿರೀನ್ ಬಾನುಗಾಗಿ ಪೋಷಕರು ಹುಡುಕಾಟ ನಡೆಸಿದ್ದರು. ಬಳಿಕ, ಶಿರೀನ್ ಪತಿ ಮುಬಾರಕ್ ಮೇಲೆ ಪೋಷಕರಿಗೆ ಅನುಮಾನ ಉಂಟಾಗಿತ್ತು.

ಹೀಗಾಗಿ ಮುಬಾರಕ್‌ನನ್ನು ಬಂಧಿಸಿ ವಿಚಾರಿಸುವಂತೆ, ಶಿರೀನ್ ಬಾನು ಪೋಷಕರು ಒತ್ತಡ ಹಾಕಿದ್ದರು. ಬಳಿಕ, ಇಂದು (ಆಗಸ್ಟ್ 23) ವಕೀಲರೊಂದಿಗೆ ಮುಬಾರಕ್ ಠಾಣೆಗೆ ಹಾಜರಾಗಿದ್ದಾರೆ. ಸೋಲದೇವನಹಳ್ಳಿ ಪೊಲೀಸರ ವಿಚಾರಣೆ ವೇಳೆ ಮುಬಾರಕ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ.

- Advertisement -

Related news

error: Content is protected !!