Saturday, June 28, 2025
spot_imgspot_img
spot_imgspot_img

ಮುತ್ತಿನ ನಗರಿಯಲ್ಲಿ ವರುಣಾಘಾತ

- Advertisement -
- Advertisement -

ಹೈದ್ರಾಬಾದ್: ಬಂಗಾಳ‌ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸುರಿಯುತ್ತಿರುವ ಮಳೆಗೆ ಆಂಧ್ರಪ್ರದೇಶದ, ತೆಲಂಗಾಣ, ಒಡಿಶಾ ಅಕ್ಷರಶಃ ತತ್ತರಿಸಿ ಹೋಗಿದೆ.

ಹೈದ್ರಾಬಾದ್ ನಲ್ಲಿ ಕಳೆದ (ಅ.13) ರಾತ್ರಿ ಸುರಿದ ಭಾರೀ ಮಳೆಯಿಂದಾಗಿ 10 ಮನೆಗಳ ಮೇಲೆ ಕಾಂಪೌಂಡ್ ಕುಸಿದ ಪರಿಣಾಮ 2ತಿಂಗಳ ಹಸುಳೆ ಸೇರಿ 9 ಜನ ಬಲಿಯಾಗಿದ್ದು, ಮೃತದೇಹಗಳು ಅವಶೇಷಗಳಡಿ ಸಿಲುಕಿಕೊಂಡಿದೆ.


ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕಳೆದ 48 ಗಂಟೆಗಳಲ್ಲಿ ತೆಲಂಗಾಣದಲ್ಲಿ 12 ಮಂದಿ ಮೃತಪಟ್ಟಿದ್ದು.ರಸ್ತೆಗಳು ಜಲಾವೃತವಾಗಿವೆ. ಹೈದ್ರಾಬಾದ್ ನಲ್ಲಿ ಮಳೆ‌ಮುಂದುವರೆದಿದ್ದು ತೀವ್ರತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ರಾಜ್ಯಸರ್ಕಾರ ಎಚ್ಚರಿಸಿದೆ.

- Advertisement -

Related news

error: Content is protected !!