

ಶ್ರೀ ಮಹಾದೇವಿ ಯುವಕ ಮಂಡಲ (ರಿ ) ಕಬಕ ಇದರ ಬೆಳ್ಳಿ ಹಬ್ಬ ಕಾರ್ಯಕ್ರಮದ ಅಂಗವಾಗಿ ಕೆಸರಡ್ ಒಂಜಿ ದಿನ ಮತ್ತು ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ದಿನಾಂಕ 22 -08-2024ನೇ ಗುರುವಾರ ಸಾಯಂಕಾಲ 7 ಗಂಟೆಗೆ ಕಬಕ ಶ್ರೀ ಮಹಾದೇವೀ ಕಲಾಮಂದಿರದಲ್ಲಿ ಜರಗಿತು.
ಶ್ರೀ ಮಹಾದೇವಿ ಮಹಿಳಾ ಮಂಡಲ ಸಹಕಾರದಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್ 8ರಂದು ಕೆಸರಡ್ ಒಂಜಿ ದಿನ ಮತ್ತು ಸೆಪ್ಟೆಂಬರ್ 29ರಂದು ಯುವಕ ಮಂಡಲದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಯನ್ನು ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ವಿ• ಚಂದ್ರಶೇಖರ ನಾಯ್ಕ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು • ವೇದಿಕೆ ಯಲ್ಲಿ ಶ್ರೀ ಮಹದೇವೀ ಧರ್ಮಸೇವಾ ವಿಶ್ವಸ್ತ ಮಂಡಳಿಯ ಕೋಶಾಧಿಕಾರಿ ಜತ್ತಪ್ಪ ಗೌಡ ಅಡ್ಯಾಲು ,ಬೆ. ಹ. ಸ. ಯ ಉಪಾಧ್ಯಕ್ಷ ಕೃಷ್ಣಪ್ಪ ಅಡ್ಯಾಲು , ಪ್ರಧಾನ ಕಾರ್ಯದರ್ಶಿ ಜಯರಾಮ್ ನೆಕ್ಕರೆ, ಯು. ಮ. ದ ಅಧ್ಯಕ್ಷ ರಕ್ಷಿತ್ ಅಡ್ಯಾಲು ಕಾರ್ಯದರ್ಶಿ ಯತೀಶ್ ಪದ್ನಡ್ಕ ಉಪಸ್ಥಿತರಿದ್ದರು ಬಾಲಕೃಷ್ಣ ಅನುಗ್ರಹ ಕಾರ್ಯಕ್ರಮ ನಿರೂಪಿಸಿದರು