Saturday, June 28, 2025
spot_imgspot_img
spot_imgspot_img

ಜುಲೈ 1ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಗೆ ಆದರ್ ದೃಢೀಕರಣ ಕಡ್ಡಾಯ – ರೈಲ್ವೆ ಸಚಿವಾಲಯ

- Advertisement -
- Advertisement -

ಸಾಮಾನ್ಯ ಜನರು ಕೂಡಾ ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಪಡೆಯುವ ನಿಟ್ಟಿನಲ್ಲಿ ಜುಲೈ ಒಂದರಿಂದ ತತ್ಕಾಲ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ದೃಢೀಕರಣ ಕಡ್ಡಾಯವಾಗಿರಲಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ. ಈ ಕುರಿತು ಎಲ್ಲಾ ವಲಯಗಳಿಗೆ ಸುತ್ತೋಲೆ ಕಳುಹಿಸಿದೆ.ಜುಲೈ 1 ರಿಂದ ಅನ್ವಯವಾಗುವಂತೆ ಆಧಾ‌ರ್ ದೃಢೀಕೃತ ಬಳಕೆದಾರರು ಮಾತ್ರ ತತ್ಕಾಲ್ ಯೋಜನೆ ಅಡಿಯಲ್ಲಿ ಟಿಕೆಟ್ ಗಳನ್ನು ಇಂಡಿಯನ್ ರೈಲ್ವೇ ಕ್ಯಾಟರಿಂಗ್‌ ಹಾಗೂ ಟೂರಿಸಂ ಕಾರ್ಪೊರೇಷನ್(ಐಆರ್‌ಸಿಟಿಸಿ)ವೆಬ್‌ಸೈಟ್/ಅದರ ಆಪ್ ಮೂಲಕ ಬುಕ್ ಮಾಡಬಹುದು. ಜುಲೈ 15ರಿಂದ ತತ್ಕಾಲ್ ಯೋಜನೆಯಡಿ ರೈಲು ಟಿಕೆಟ್ ಬುಕ್ ಮಾಡಲು ಆಧಾರ್ ಆಧಾರಿತ ಒಟಿಪಿ ದೃಢೀಕರಣವನ್ನು ಕೂಡ ಕಡ್ಡಾಯ ಮಾಡಲಾಗುವುದು.

ತತ್ಕಾಲ್ ರೈಲು ಟಿಕೆಟ್ ಅನ್ನು ಭಾರತೀಯ ರೈಲ್ವೇ/ಅಧಿಕೃತ ಏಜೆಂಟ್‌ಗಳ ಗಣಿಕೀಕೃತ ಪಿಆರ್‌ಎಸ್‌(ಪ್ರಯಾಣಿಕರ ಕಾಯ್ದಿರಿಸುವ ವ್ಯವಸ್ಥೆ)ಕೌಂಟ‌ರ್ ಮೂಲಕ ಬುಕ್ ಮಾಡಲು ಲಭ್ಯವಿರುತ್ತದೆ. ಆದರೆ, ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಬಳಕೆದಾರರು ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಒಟಿಪಿಯನ್ನು ದೃಢೀಕರಿಸಿದ ಬಳಿಕ ಮಾತ್ರವೇ ಟಿಕೆಟ್ ಬುಕ್ ಮಾಡಲು ಸಾಧ್ಯ. ಇದನ್ನು ಜುಲೈ 15ರಿಂದ ಅನುಷ್ಠಾನಗೊಳಿಸಲಾಗುವುದು. ತತ್ಕಾಲ್ ಬುಕ್ಕಿಂಗ್ ತೆರೆದ ಮೊದಲ 30 ನಿಮಿಷಗಳವರೆಗೆ ಭಾರತೀಯ ರೈಲ್ವೆಯ ಅಧಿಕೃತ ಟಿಕೆಟ್ ಏಜೆಂಟರಿಗೆ ಟಿಕೆಟ್ ಬುಕ್ ಮಾಡಲು ಅವಕಾಶವಿಲ್ಲ. ಹವಾನಿಯಂತ್ರಿತ ಬೋಗಿಗಳಿಗೆ ಬೆಳಗ್ಗೆ 10ರಿಂದ 10.30ರ ವರೆಗೆ ಹಾಗೂ ಹವಾನಿಯಂತ್ರಿತವಲ್ಲದ ಬೋಗಿಗಳಿಗೆ ಬೆಳಗ್ಗೆ 11ರಿಂದ 11.30ರ ವರೆಗೆ ಟಿಕೆಟ್ ಬುಕ್ ಮಾಡಲು ನಿರ್ಬಂಧ ಇರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವ್ಯವಸ್ಥೆಗೆ ಅಗತ್ಯದ ಬದಲಾವಣೆಗಳನ್ನು ಮಾಡುವಂತೆ ಹಾಗೂ ಈ ಬದಲಾವಣೆಗಳ ಕುರಿತು ಎಲ್ಲಾ ವಲಯ ರೈಲ್ವೇಗಳಿಗೆ ಮಾಹಿತಿ ನೀಡುವಂತೆ ಸಚಿವಾಲಯ ಕೇಂದ್ರ ರೈಲ್ವೆ ಮಾಹಿತಿ ವ್ಯವಸ್ಥೆ (ಸಿಆರ್‌ಐಎಸ್‌) ಹಾಗೂ ಐಆರ್‌ಸಿಟಿಸಿಗೆ ನಿರ್ದೇಶಿಸಿದೆ.

- Advertisement -

Related news

error: Content is protected !!