Thursday, May 2, 2024
spot_imgspot_img
spot_imgspot_img

ಜೆ.ಸಿ.ಐ. ವಿಟ್ಲ ಘಟಕದ ಪೂರ್ವಾಧ್ಯಕ್ಷ ಜೆ.ಸಿ. ಚಂದ್ರಹಾಸ ಶೆಟ್ಟಿಯವರಿಗೆ “ಉದ್ಯೋಗ ರತ್ನ ಪ್ರಶಸ್ತಿ”

- Advertisement -G L Acharya panikkar
- Advertisement -

ಜೆ.ಸಿ.ಐ. ಇಂಡಿಯಾ ವಲಯ 15 ರ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗ ಹಾಗೂ ವ್ಯವಹಾರ ಸಮ್ಮೇಳನ “ವೃದ್ಧಿ” ಜೆ.ಸಿ. ಶಂಕರನಾರಾಯಣರ ಆತಿಥ್ಯದಲ್ಲಿ ಹಾಲಾಡಿಯ ಶಾಲಿನಿ ಜೆ. ಶಂಕರ್ ಕನ್ವೆನ್ಸನ್ ಸೆಂಟರ್‌ನಲ್ಲಿ ಜುಲೈ 23 ರಂದು ನಡೆಯಿತು.

ಈ ಸಮ್ಮೇಳನದಲ್ಲಿ ಜೆ.ಸಿ.ಐ. ವಿಟ್ಲ ಘಟಕದ 2021 ರಲ್ಲಿ ವಲಯ 15 ರಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ ಪಡೆದ ವಿಟ್ಲ ಘಟಕದ ಪೂರ್ವಾಧ್ಯಕ್ಷ ಜೆ.ಸಿ. ಚಂದ್ರಹಾಸ ಶೆಟ್ಟಿಯವರಿಗೆ “ಉದ್ಯೋಗರತ್ನ” ಪ್ರಶಸ್ತಿಯನ್ನು ವಲಯಾಧ್ಯಕ್ಷ ಜೆ.ಸಿ. ಪುರುಷೋತ್ತಮ ಶೆಟ್ಟಿಯವರು ನೀಡಿ ಗೌರವಿಸಿದರು. ಈ ಪ್ರಶಸ್ತಿಯನ್ನು 2021 ರಲ್ಲಿ ಅವರ ಅಧ್ಯಕ್ಷೀಯ ಅವಧಿಯಲ್ಲಿ ಮಾಡಿದ ಅದ್ವಿತೀಯ ಸಾಧನೆ ಹಾಗೂ ಅವರ ಉದ್ಯೋಗ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ವಲಯ ನಿಕಟ ಪೂರ್ವಾಧ್ಯಕ್ಷ ಜೆ.ಸಿ. ರಾಯನ್ ಉದಯಕ್ರಸ್ತ, ವಲಯ ಉಪಾಧ್ಯಕ್ಷ ಜೆ.ಸಿ. ಅಜಿತ್‌ಕುಮಾರ್ ರೈ, ವ್ಯವಹಾರ ವಿಭಾಗದ ನಿರ್ದೇಶಕ ನಾಗರಾಜ ಪೂಜಾರಿ, ವಿಟ್ಲ ಘಟಕದ ಅಧ್ಯಕ್ಷ ಜೆ.ಸಿ. ಪರಮೇಶ್ವರ ಹೆಗ್ಡೆ, ವಿಟ್ಲ ಘಟಕದ ನಿಕಟಪೂರ್ವ ಅಧ್ಯಕ್ಷ ಜೆ.ಸಿ. ಚಂದ್ರಹಾಸ ಕೊಪ್ಪಳ, ಕಾರ್ಯದರ್ಶಿ ಜೆ.ಸಿ. ದೀಕ್ಷಿತ್, ಪದಾಧಿಕಾರಿಗಳಾದ ಜೆ.ಸಿ. ಅಭಿಷೇಕ್, ಜೆ.ಸಿ. ರಾಜೀವ್, ಜೆ.ಸಿ. ಸಾರಿಕಾಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!