Saturday, June 28, 2025
spot_imgspot_img
spot_imgspot_img

ಜಿಡಿಪಿ ಕುಸಿತ: ನಿರ್ಮಲಾ ಸೀತರಾಮನ್ ವಿರುದ್ಧ ದಿನೇಶ್ ಗುಂಡೂರಾವ್ ವ್ಯಂಗ್ಯ

- Advertisement -
- Advertisement -

ಬೆಂಗಳೂರು: ಇನ್ನಾದರೂ ದೇವರ ಆಟ ಕಡಿಮೆಯಾಗಿ ಭಾರತದ ಜಿಡಿಪಿ ಏರುವಂತೆ ಮಾಡಲು ಪ್ರಾರ್ಥಿಸುವಂತೆ ಹೇಳಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.

ದೇಶದ ಜಿಡಿಪಿ ಕುಸಿತ ಹಿನ್ನಲೆಯಲ್ಲಿ ಟ್ವೀಟ್ ಮಾಡಿದ ದಿನೇಶ್ ಗುಂಡೂರಾವ್, ನಿರ್ಮಲಾ ಸೀತಾರಾಮನ್ ಅವರೇ, ಕರುಣಾಮಯಿಯಾದ ಆ ದೇವರು ಇಷ್ಟೊಂದು ಆಟವಾಡಬಾರದಿತ್ತು. ನಿಮ್ಮ ದೈವಾಂಶ ಸಂಭೂತ ಮೋದಿಯವರಿಗೆ ತಾವೇ ದೇವರು ಎಂಬ ಭ್ರಮೆ ಬಿಟ್ಟು, ಸಾಧ್ಯವಾದರೆ ನಿಜವಾದ ದೇವರ ಬಳಿ ಮಾತನಾಡಲು ಹೇಳಿ. ಇನ್ನಾದರೂ ದೇವರ ಆಟ ಕಡಿಮೆಯಾಗಿ ಭಾರತದ ಜಿಡಿಪಿ ಏರುವಂತೆ ಮಾಡಲು ಪ್ರಾರ್ಥಿಸುವಂತೆ ಹೇಳಿ ಎಂದು ಟೀಕಿಸಿದ್ದಾರೆ.

- Advertisement -

Related news

error: Content is protected !!