- Advertisement -
- Advertisement -
ಕಬಕ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಬಕ ಗ್ರಾಮ ಪಂಚಾಯತ್ನ ಸ್ವಾತಂತ್ರ್ಯ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರು ತಡೆ ಒಡ್ಡಿದ ಘಟನೆ ನಡೆದಿದೆ.
ಈ ಘಟನೆಯನ್ನು ವಿರೋಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆ ಕಬಕ ಜಂಕ್ಷನ್ ನಲ್ಲಿ ಸಂಘ ಪರಿವಾರದ ನೂರಾರು ಹಿಂದೂ ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಯಲ್ಲಿ ಪ್ರಮುಖರಾದ ಶರಣ್ ಪಂಪ್ ವೆಲ್, ಮುರಳಿಕೃಷ್ಣ ಹಸಂತಡ್ಕ, ಆರ್.ಸಿ. ನಾರಾಯಣ್, ಜಗನ್ನಿವಾಸ್ ರಾವ್, ಚಿನ್ಮಯ್ ಜೀವಂಧರ್ ಜೈನ್, ಅಜಿತ್ ರೈ ಹೊಸಮನೆ, ಕೃಷ್ಣ ಪ್ರಸನ್ನ ಸಾಜ ರಾಧಾಕೃಷ್ಣ ಆಳ್ವ, ನರಸಿಂಹ ಶೆಟ್ಟಿ, ಮಾಣಿ, ಗಣರಾಜ್ ಭಟ್ ಸೇರಿದಂತೆ ಹಿಂದೂ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
- Advertisement -