Thursday, April 25, 2024
spot_imgspot_img
spot_imgspot_img

ಕಡಬ ಮೂಲದ ಹಿರಿಯ ಪತ್ರಕರ್ತ, ಜನಾರ್ಧನ ಪುರಿಯ ನಿಧನ

- Advertisement -G L Acharya panikkar
- Advertisement -
driving

ಕಡಬ: ಪರಿವರ್ತನಾ ಸುದ್ದಿ ಪತ್ರಿಕೆಯ ಸಂಪಾದಕ, ಜರ್ನಲಿಸ್ಟ್ ಯೂನಿಯನ್ ಕಡಬ ಘಟಕದ ಗೌರವ ಅಧ್ಯಕ್ಷ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ, ಪ್ರಸ್ತುತ ಮುಂಬೈಯಲ್ಲಿ ನೆಲೆಸಿದ್ದ ಜನಾರ್ದನ ಅವರು ಆ.28 ರಂದು ನಿಧನ ಹೊಂದಿದ್ದಾರೆ.

ಇವರು ಮುಂಬೈಯಲ್ಲಿ ಪ್ರಕಟಗೊಳ್ಳುತ್ತಿದ್ದ ಪರಿವರ್ತನಾ ಸುದ್ದಿ ಎಂಬ ಮಾಸ ಪತ್ರಿಕೆಯನ್ನು ಕಡಬದಿಂದಲೂ ಪ್ರಕಟಿಸುತ್ತಿದ್ದರು. ಇವರು ಉತ್ತಮ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ.

ಇವರು ಮುಂಬೈಯಲ್ಲಿದ್ದು ಅಸೌಖ್ಯದಿಂದ ಕೆಲ ದಿನಗಳ ಹಿಂದೆ ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ಆ.27 ರ ರಾತ್ರಿ ಮುಂಬೈಯಲ್ಲಿರುವ ನಿವಾಸದಲ್ಲಿ ಅಸ್ವಸ್ಥ ಗೊಂಡು ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ ಪ್ರೇಮ, ಪುತ್ರ ಪ್ರತೀಕ್,ಪುತ್ರಿ ಪ್ರಿಯಾಂಕ ಅವರನ್ನು ಅಗಲಿದ್ದಾರೆ.

- Advertisement -

Related news

error: Content is protected !!