Sunday, June 29, 2025
spot_imgspot_img
spot_imgspot_img

ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು; ಪ್ರಕರಣ ದಾಖಲು..!

- Advertisement -
- Advertisement -

ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳು ಹಾಗೂ ನಗದು ಕಳವು ಮಾಡಿದ ಘಟನೆ ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ಮರ್ಧಾಳ ಎಂಬಲ್ಲಿ ನಡೆದಿದೆ.

ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ಮರ್ಧಾಳ ಕುರಿಯ ಕೋಸ್ ಜೇಮ್ಸ್ ಎಂಬವರ ದೂರಿನಂತೆ ಆಟೋ ಚಾಲಕ ಕೆಲಸ ಮಾಡಿಕೊಂಡಿದ್ದ ಇವರು ಜ. 12 ರಂದು ಪತ್ನಿ ಹಾಗೂ ಮಗನೊಂದಿಗೆ ಪ್ರಾರ್ಥನೆ ಮಾಡಲು ಬೆಳಿಗ್ಗೆ ಮನೆಗೆ ಬೀಗ ಹಾಕಿ ಹೋದವರು ಪ್ರಾರ್ಥನೆ ಮುಗಿಸಿ ಸಾಯಂಕಾಲ ಅವರ ಮಗ ಜೋಯಲ್ ವಾಪಾಸು ಮನೆಗೆ ಬಂದು ಮನೆಯ ಎದುರು ಬಾಗಿಲಿನ ಬೀಗ ತೆಗೆದು ಒಳಗೆ ಹೋದಾಗ, ಮನೆಯ ಒಳಗಡೆ ಬೆಡ್ ರೂಮ್ ನಲ್ಲಿದ್ದ ಗೋದ್ರೆಜ್ ಬಾಗಿಲು ತೆರೆದಿದ್ದು ಕಂಡುಬಂದಿರುತ್ತದೆ. ಈ ಬಗ್ಗೆ ಕುರಿಯ ಕೋಸ್‌‌ರವರಿಗೆ ಹಾಗೂ ಪತ್ನಿಗೆ ದೂರವಾಣಿ ಮುಖೇನ ಮಗ ಜೋಯಲ್ ವಿಷಯ ತಿಳಿಸಿರುತ್ತಾರೆ.

ಕೂಡಲೇ ಮನೆಗೆ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿ ಯಾರೋ ಕಳ್ಳರು ಗೋದ್ರೆಜ್ ಒಳಗೆ ಇಟ್ಟಿದ್ದ ಒಟ್ಟು 76 ಗ್ರಾಂ ಚಿನ್ನಾಭರಣಗಳು ಹಾಗೂ ನಗದು ರೂ 1,00,000/- ಕಳವು ಮಾಡಿರುವುದಾಗಿ ಕಂಡು ಬಂದಿದೆ. ಕಳುವಾಗಿರುವ ಚಿನ್ನದ ಆಭರಣಗಳ ಮೌಲ್ಯ ಅಂದಾಜು ರೂ 2,66,000/- ಹಾಗೂ ನಗದು 1,00,000/- ಆಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ : 02/2025 ಕಲಂ:331(3),305, BNS ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!